ಮತ್ತೆ ಡ್ರೋಣ್​ ಹಾರಿಸಿದ ಪ್ರತಾಪ್​ – ರೈತರ ಜಮೀನಿಗೆ ಔಷಧಿ ಸಿಂಪಡಣೆ

ಡ್ರೋಣ್​ ಪ್ರತಾಪ್​ ಈಗ ಮತ್ತೆ ಸುದ್ದಿಯಾಗಿದ್ದಾರೆ. ರೈತರ ಜಮೀನುಗಳಿಗೆ ಔಷಧಿ ಸಿಂಪಡಿಕೆಗಾಗಿ ಡ್ರೋಣ್​ ಕಂಡುಹಿಡಿದು ಔಷಧಿ ಸಿಂಪಡಿಸಿ ಮೊದಲ ಸಂಪಾದನೆಯನ್ನೂ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ತಾವೇ ತಯಾರಿಸಿದ ಡ್ರೋಣ್​ನಿಂದ ಔಷಧಿ ಸಿಂಪಡಣೆ ಮಾಡಿರುವ ವೀಡಿಯೋ ಲಭ್ಯವಾಗಿದೆ.

ಔಷಧಿ‌ ಸಿಂಪಡಣೆಗೂ ಮೊದಲು ತಾವು ನಿರ್ಮಿಸಿದ ಡ್ರೋಣ್​ಗೆ  ಪೂಜೆ ಸಲ್ಲಿಸಿದ್ದಾರೆ. ಡೋನಾರ್ಕ್ ಏರೋಸ್ಪೇಸ್ ಸಂಸ್ಥೆ ವತಿಯಿಂದ ದ್ರೋಣ್ ತಯಾರಿಸಿದ್ದಾಗಿ ಡ್ರೋಣ್​ ಪ್ರತಾಪ್​ ಹೇಳಿಕೊಂಡಿದ್ದಾರೆ.