FAKE NEWS: ಸುಳ್ಳು ಸುದ್ದಿ- ಬಹಿರಂಗ ಕ್ಷಮೆ ಕೇಳಿದ ಪ್ರಮುಖ ಪತ್ರಿಕೆ ದೈನಿಕ್​ ಭಾಸ್ಕರ್​

ತಮಿಳುನಾಡಿನಲ್ಲಿ (Tamilnadu) ಬಿಹಾರ (Bihar) ಮೂಲದ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಸುದ್ದಿ (Fake News) ಪ್ರಕಟಿಸಿದ್ದ ಪ್ರಮುಖ ಹಿಂದಿ ಪತ್ರಿಕೆ ದೈನಿಕ್​ ಭಾಸ್ಕರ್ (Dainik Bhaskar)​ ಬಹಿರಂಗ ಕ್ಷಮೆ ಕೇಳಿದೆ.

ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ತನ್ನ ಪತ್ರಿಕೆಯ ಮುಖಪುಟದಲ್ಲಿ ದೈನಿಕ್​ ಭಾಸ್ಕರ್​ ತಮಿಳುನಾಡು ಮತ್ತು ಬಿಹಾರ ಜನತೆಯ ಕ್ಷಮೆಯಾಚಿಸಿದೆ.

ಈ ಸುಳ್ಳು ಆಧರಿಸಿಯನ್ನೇ ಬಿಹಾರದಲ್ಲಿ ಬಿಜೆಪಿ ಸಿಎಂ ನಿತೀಶ್​ ಕುಮಾರ್​ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿತ್ತು.

ಮುಖಪುಟದಲ್ಲಿ ಬಹಿರಂಗ ಕ್ಷಮೆಯಾಚಿಸುವಂತೆ ಪತ್ರಿಕೆಗೆ ಮದ್ರಾಸ್​ ಹೈಕೋರ್ಟ್ (Madras High Court)​ ಆದೇಶಿಸತ್ತಲ್ಲದೇ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. 

ಮಾರ್ಚ್​ 2ರಂದು ದೈನಿಕ್​ ಭಾಸ್ಕರ್​ ತನ್ನ ಮುಖಪುಟದಲ್ಲೇ ಬಿಹಾರ ಮೂಲದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ ಎಂದು ಸುಳ್ಳು ಸುದ್ದಿ ಪ್ರಕಟಿಸಿತ್ತು.

ಈ ವರದಿ ಬಳಿಕ ತಮಿಳುನಾಡು ಪೊಲೀಸ್​ ಮುಖ್ಯಸ್ಥರ ಸ್ಪಷ್ಟನೆ ಬಳಿಕ ಪತ್ರಿಕೆ ತನ್ನ ಡಿಜಿಟಲ್​ ವೆಬ್​ಸೈಟ್​ ಮತ್ತು ಟ್ವಿಟ್ಟರ್​ ಒಳಗೊಂಡಂತೆ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದ ಆ ಸುದ್ದಿಯನ್ನು ತೆಗೆದುಹಾಕಿತ್ತು.

ತಮಿಳುನಾಡು ಮತ್ತು ಬಿಹಾರ ಜನತೆಗೆ ಆಗಿರುವ ಮುಜುಗರಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ದೈನಿಕ್​ ಭಾಸ್ಕರ್​ ಪತ್ರಿಕೆ ಹೇಳಿದೆ.

LEAVE A REPLY

Please enter your comment!
Please enter your name here