ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಹಿಂದೂ ದೇವರನ್ನು ವಿಮರ್ಶೆ ಮಾಡಿದರು ಎಂಬ ಕಾರಣಕ್ಕೆ ದೇಗುಲವೊಂದರಲ್ಲಿ ದಲಿತ ಯುವಕನನ್ನು ಘೋರವಾಗಿ ಅಪಮಾನಿಸಲಾಗಿದೆ.
ದಲಿತ ಯುವಕನ ಮೂಗನ್ನು ತಾಕಿಸಿ, ನಿಂದಿಸಲಾಗಿದೆ. ಇದು ವೈರಲ್ ಆಗುತ್ತಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. 11ಮಂದಿ ವಿರುದ್ಧ FIR ದಾಖಲಿಸಿ, ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಪೋಲೀಸರ ಮಾಹಿತಿ ಪ್ರಕಾರ
ಇತ್ತೀಚಿಗೆ ಬಿಡುಗಡೆ ಅದ ದ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ದಲಿತ ಯುವಕ ರಾಜೇಶ್ ಕುಮಾರ್ ಮೇಘವಾಲ್ ಟೀಕಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಲವರು ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಾಜೇಶ್ ಕುಮಾರ್ ಮೇಘವಾಲ್, ರಾಮ, ಕೃಷ್ಣ ದೇವರನ್ನು ಕಟುವಾಗಿ ಟೀಕಿಸಿದ್ದರು.
ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ಗ್ರಾಮದ ಕೆಲವರು, ರಾಜೇಶ್ ರನ್ನು ದೇಗುಲಕ್ಕೆ ಕರೆಯಿಸಿ, ಕ್ಷಮೆ ಕೇಳಿಸಿದ್ದಾರೆ.ತಪ್ಪು ಒಪ್ಪಿಕೊಳ್ಳಬೇಕೆಂದು ಬಲವಂತವಾಗಿ ಮೂಗನ್ನು ನೆಲಕ್ಕೆ ತಾಕಿಸಿ ಅಪಮಾನಿಸಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.