No Result
View All Result
ಒಂದು ಊಟ ತಗೊಂಡ್ರೆ ಮತ್ತೊಂದು ಊಟ ಫ್ರೀ.. ನಮ್ಮ ಆಪ್ ಡೌನ್ಲೋಡ್ ಮಾಡ್ಕೊಳಿ.. ಎಂಬ ಜಾಹೀರಾತು ನಂಬಿದ ದೆಹಲಿಯ ಬ್ಯಾಂಕ್ ಉದ್ಯೋಗಿ ಸವಿತಾಶರ್ಮಾ 90 ಸಾವಿರ ರೂಪಾಯಿ ಕೊಳ್ಕೊಂಡಿದ್ದಾರೆ.
ಬ್ಯಾಂಕ್ ಒಂದರಲ್ಲಿ ಸೀನಿಯರ್ ಎಕ್ಸಿಕ್ಯೂಟೀವ್ ಆಗಿರುವ ಸವಿತಾ ಶರ್ಮಾ ಅವರಿಗೆ ಅವರ ಬಂಧುವೊಬ್ಬರು ಫೇಸ್ಬುಕ್ನಲ್ಲಿ ಬಂದ ಫ್ರೀ ಥಾಲಿಯ ಜಾಹೀರಾತಿನ ಬಗ್ಗೆ ತಿಳಿಸಿದರು. ಸವಿತಾ ಶರ್ಮಾ ಅವರಿಗೂ ಒಂದು ಊಟ ಫ್ರೀ ಅಲ್ವಾ ಏಕೆ ಟ್ರೈ ಮಾಡಬಾರದು ಎನಿಸಿತು.
ಕೂಡಲೇ ಸವಿತಾ ಶರ್ಮಾ ಸೈಟ್ಗೆ ತೆರಳಿ ಅಲ್ಲಿದ್ದ ನಂಬರ್ಗೆ ಕರೆ ಮಾಡಿದರು. ತಕ್ಷಣಕ್ಕೆ ರೀಪ್ಲೇ ಬರಲಿಲ್ಲ. ನಂತರ ಕರೆ ಮಾಡಿದ ಕಾಲರ್,
ಸಾಗರ್ ರತ್ನ ರೆಸ್ಟೋರೆಂಟ್ನಿಂದ ಕರೆ ಮಾಡುತ್ತಿದ್ದೇನೆ.. ಒಂದು ಲಿಂಕ್ ಕಳಿಸುತ್ತೇನೆ.. ಡೌನ್ಲೋಡ್ ಮಾಡ್ಕೊಳಿ ಎಂದರು. ಆಪ್ಗೆ ಸಂಬಂಧಿಸಿದ ಯೂಸೆರ್ ಐಡಿ, ಪಾಸ್ವರ್ಡ್ ಕಳಿಸಿದರು.
ಫ್ರೀ ಥಾಲಿ ಆಫರ್ ಉಪಯೋಗಿಸಿಕೊಳ್ಳುವ ಮುನ್ನ ಈ ಆಪ್ ಡೌನ್ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದರು. ಅವರು ಹೇಳಿದ್ದೆಲ್ಲವನ್ನು ಮಾಡಿದೆ.
ಆ ಸಮಯದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬರಲಿಲ್ಲ.. ಆ ನಂತರ ನನ್ನ ಬ್ಯಾಂಕ್ ಖಾತೆಯಿಂದ 40,000 ರೂ. ಮತ್ತೊಮ್ಮೆ 50,000 ರೂ. ಡ್ರಾ ಆಗಿದೆ ಎಂಬ ಸಂದೇಶಗಳು ಬಂದವು.
ಆ ಹಣ ನನ್ನ ಕ್ರೆಡಿಟ್ ಕಾರ್ಡ್ನಿಂದ ನನ್ನ ಪೇಟಿಎಂಗೆ ಹೋಗಿ.. ವಂಚಕನ ಖಾತೆ ಸೇರಿದ್ದು ನನಗೆ ಅಚ್ಚರಿಯುಂಟು ಮಾಡಿದೆ. ಆ ವಿವರಗಳನ್ನು ಕಾಲರ್ ನನಗೆ ತಿಳಿಸಲಿಲ್ಲ. ನಾನು ಕೂಡಲೇ ನನ್ನ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದೆ ಎಂದು ದೂರಿನಲ್ಲಿ ಸವಿತಾ ಶರ್ಮಾ ತಿಳಿಸಿದ್ದಾರೆ.
No Result
View All Result
error: Content is protected !!