ಬೆಂಗಳೂರಿನ ಚಿಕ್ಕಬಾಣವರ ಬಳಿಯ ಆಚಾರ್ಯ ಕಾಲೇಜು ರಸ್ತೆ ಸಂಪೂರ್ಣ ಗುಂಡಿಮಾಯವಾಗಿದೆ. ಆಚಾರ್ಯ ಕಾಲೇಜು ರಸ್ತೆಯಲ್ಲಿ ಬರುವ ಗಣಪತಿ ನಗರದ ವ್ಯಾಪ್ತಿಯ ಮುಖ್ಯ ರಸ್ತೆ ತೀರಾ ಹದಗೆಟ್ಟಿದೆ. ರಸ್ತೆಯ ದೊಡ್ಡ ದೊಡ್ಡ ಗುಂಡಿಗಳು ಸರಣಿ ಅನಾಹುತಗಳಿಗೆ ಕಾರಣವಾಗುತ್ತಿವೆ.
![](https://www.pratikshana.com/wp-content/uploads/2022/09/img-20220906-wa00135144925500111470448.jpg)
ಸೆಪ್ಟೆಂಬರ್ 05ರ ರಾತ್ರಿ 8:30ರ ಸುಮಾರಿಗೆ ಜಾಲವೃತವಾದ ಎಡಿಫಿ ಸ್ಕೂಲ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತಿದ್ದ ವ್ಯಕ್ತಿಯೊಬ್ಬರು ಗುಂಡಿಗೆ ಬಿದ್ದು ಗಾಯ ಗೊಂಡಿದ್ದಾರೆ.
![](https://www.pratikshana.com/wp-content/uploads/2022/09/img-20220906-wa00096772362223099021184-768x1024.jpg)
ಗಣಪತಿ ನಗರದ ಮಲ್ಲಿಕಾರ್ಜುನ ಎಂಬುವವರ ಕಾಲಿನ ಮೂಳೆ ಮುರಿದುಹೋಗಿದೆ. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಅನಾಹುತಗಳು ಇತೀಚಿಗೆ ಇಲ್ಲಿ ಸಾಮಾನ್ಯವಾಗಿವೆ.
![](https://www.pratikshana.com/wp-content/uploads/2022/09/img-20220906-wa0003394366621171850433-768x1024.jpg)
ರಸ್ತೆ ಗುಂಡಿ ಮುಚ್ಚುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ಮುಖಂಡ ಅರುಣ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
![](https://www.pratikshana.com/wp-content/uploads/2022/09/img-20220906-wa00174728594574086183026-768x1024.jpg)
ಇದೀಗ ಸ್ಥಳೀಯ ಶಾಸಕರಾದ ದಾಸರಹಳ್ಳಿ ಮಂಜುನಾಥ ಅವರಿಗೆ ಗಣಪತಿ ನಗರ ಕ್ಷೇಮಭಿವೃದ್ಧಿ ಸಂಘದ ವತಿಯಿಂದ ಅಂತಿಮ ಮನವಿ ಸಲ್ಲಿಸುತ್ತೇವೆ. ಇದಕ್ಕೂ ಸ್ಪಂದಿಸದೆ ಇದ್ದಲ್ಲಿ ರಸ್ತೆ ಬಂದ್ ಮಾಡ್ತೀವಿ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸ್ತೀವಿ ಸ್ಥಳೀಯ ಮುಖಂಡ ಅರುಣ್ ಕುಮಾರ್ ಎಚ್ಚರಿಸಿದ್ದಾರೆ.