ನನ್ನ ಬಗ್ಗೆ ಕನ್ನಡಪ್ರಭ, ಏಷ್ಯಾನೆಟ್​ ಸುವರ್ಣನ್ಯೂಸ್​ ಸುಳ್ಳು ಸುದ್ದಿ

ನನ್ನ ಬಗ್ಗೆ ಕನ್ನಡಪ್ರಭ ದಿನ ಪತ್ರಿಕೆ ಮತ್ತು ಏಷ್ಯಾನೆಟ್ ಸುವರ್ಣ​ ನ್ಯೂಸ್​ ಚಾನೆಲ್​ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್​ ಹೇಳಿದ್ದಾರೆ.
ಈ ಬಗ್ಗೆ ಎಂಬಿ ಪಾಟೀಲ್​ ಅವರು ಟ್ವೀಟಿಸಿದ್ದಾರೆ.

ನನ್ನ ಬಗ್ಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್​ ಸುವರ್ಣ ನ್ಯೂಸ್​ ಚಾನೆಲ್​ನಲ್ಲಿ ಸುದ್ದಿ ಪ್ರಸಾರವಾಗಿದೆ. ಅದೆಲ್ಲವೂ ಆಧಾರರಹಿತ. 

ಈ ಹಿಂದೆ ಸಿದ್ದರಾಮಯ್ಯನವರ ಹೆಸರಲ್ಲಿ ನಕಲಿ ಪತ್ರವನ್ನು ಹಬ್ಬಿಸಲಾಯಿತು, ತಪ್ಪು ಗ್ರಹಿಕೆಯನ್ನು ಸೃಷ್ಟಿಸಲು ಬಿಜೆಪಿ ಕರ್ನಾಟಕ ಘಟಕ ಪ್ರಯತ್ನಿಸುತ್ತಿದೆ

ಎಂದು ಎಂಬಿ ಪಾಟೀಲ್​ ಅವರು ಟ್ವೀಟಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆಯಲ್ಲಿ ತಮ್ಮನ್ನು ಕಡೆಗಣಿಸಲಾಯಿತು ಎಂದು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್​ ಮುನಿಸಿಕೊಂಡಿದ್ದಾರೆ ಎಂದು ಕನ್ನಡಪ್ರಭ ದಿನಪತ್ರಿಕೆ ಸುದ್ದಿ ಪ್ರಕಟಿಸಿತ್ತು ಮತ್ತು ಇದೇ ಸುದ್ದಿಯನ್ನು ಏಷ್ಯಾನೆಟ್​​ ಸುವರ್ಣನ್ಯೂಸ್​ ಪ್ರಸಾರ ಮಾಡಿತ್ತು.
ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಈ ಎರಡೂ ಸುದ್ದಿಸಂಸ್ಥೆಗಳ ಮಾಲೀಕರು.

LEAVE A REPLY

Please enter your comment!
Please enter your name here