ಕಾರ್ಕಳ: ಶನಿವಾರ ಆಯುಷ್ಮಾನ್​ ಭಾರತ್​ ಆರೋಗ್ಯ ಕಾರ್ಡ್​​ ಕಾರ್ಯಾಗಾರ

ಕಾರ್ಕಳ ನಗರ ಬಿಜೆಪಿ ಆಶ್ರಯದಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಆಭಾ ಕಾರ್ಡ್) ಇದರ ಉಚಿತ ನೋಂದಣಿ ಕಾರ್ಯಾಗಾರ  ಆಯೋಜಿಸಲಾಗಿದೆ.
ಕಾರ್ಕಳ ಪುರಸಭೆಯ 19ನೇ ವಾರ್ಡಿನ (ಹಿರಿಯಂಗಡಿ ) ಹಾಗೂ 20ನೇ ವಾರ್ಡ್(ಕುಂಟಲ್ಪಾಡಿ)  ಪರಿಸರದ ಸಾರ್ವಜನಿಕರಿಗಾಗಿ  ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ  ಆನೆಕೆರೆ  ಕಾರ್ಕಳ ಕಾರ್ಯಾಗಾರ ನಡೆಯಲಿದೆ.

ದಿನಾಂಕ 8-10-22 ನೇ ಶನಿವಾರ ಸಮಯ  ಬೆಳಿಗ್ಗೆ 9.00 ರಿOದ 4.00 ರವರಗೆ ಆಯೋಜಿಸಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ  ಸದುಪಯೋಗ ಪಡೆದುಕೊಳ್ಳಬೇಕಾಗಿ ಕಾರ್ಕಳ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್​ ಜೈನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.