ವಿಜಯಪುರದಲ್ಲಿ ರಾಜಗುರು ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತಗೊಂಡ ಪರಿಣಾಮ ರಾಶಿಯೊಳಗೆ ಸಿಲುಕಿದ್ದ ಐವರು ಕಾರ್ಮಿಕರ ಮೃತಪಟ್ಟಿದ್ದು, ಶವ ಹೊರಗೆ ತೆಗೆದಿದ್ದಾರೆ.
ಬಿಹಾರ ಮೂಲದ 25 ವರ್ಷದ ರಾಜೇಶ್ ಮುಖಿಯಾ, 29 ವರ್ಷದ ರಾಮ್ರೀಜ್ ಮುಖಿಯಾ, 26 ವರ್ಷದ ಸಂಬೂ ಮುಖಿಯಾ ಮೃತ ಕಾರ್ಮಿಕರು.
ರಾಶಿಯೊಳಗೆ ಇನ್ನೂ 6 ರಿಂದ 7 ಜನ ಕಾರ್ಮಿಕರು ಸಿಲುಕಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಎರಡು ಎಸ್ಡಿಆರ್ಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಕೂಡ ಆಗಮಿಸಿದೆ.