BIG BREAKING: ಬಿಜೆಪಿ ವಿರುದ್ಧವೇ ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್​ ಕೋಟ್ಯಾನ್​ ಗುಡುಗು

ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್​ ಕೋಟ್ಯಾನ್​ ಅವರು ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ  ಮೂಡಬಿದ್ರೆ ಕ್ಷೇತ್ರದಲ್ಲಿ ಹೊಸ ರಾಜಕೀಯ ಬೆಳವಣಿಗೆ ನಡೆದಿದೆ.

ಮತ ನೀಡದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಕೆಲಸ ಯಾಕೆ ಮಾಡಿಕೊಡಬೇಕು ಎಂಬ ಅಹಂಕಾರ ಬಿಜೆಪಿ ನಾಯಕರಿಗೆ ಇದೆ

ಎನ್ನುವ ಮೂಲಕ ಪಕ್ಷದ ವಿರುದ್ಧವೇ ಶಾಸಕ ಉಮಾನಾಥ್​ ಕೋಟ್ಯಾನ್​ ಕಿಡಿಕಾರಿದ್ದಾರೆ.

ನಮ್ಮ ಬಿಜೆಪಿಯವರು ಹೇಳುವುದೇನೆಂದರೆ ಬ್ಯಾರಿಗಳು ಮತ್ತು ಪೊರ್ಬುಗಳು (ಕ್ರಿಶ್ಚಿಯನ್ನರು) ನಮಗೆ ವೋಟ್​ ಹಾಕುವುದಿಲ್ಲ, ನಾವು ಯಾಕೆ ಕೆಲಸ ಮಾಡ್ಬೇಕು ಅಂತ. ನಾನು ನೇರ ಮಾತಾಡುವವನು. ನಮ್ಮ ಪಾರ್ಟಿಯವರ ಅಹಂಕಾರ ಏನೆಂದರೆ ನಾವು ಯಾಕೆ ಅವರಿಗೆ ಕೆಲಸ ಮಾಡ್ಬೇಕು. ಆದರೆ ನಾನು ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮಸೀದಿ, ಚರ್ಚ್​ಗಳಿಗೆ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಮಸೀದಿಗಳಿಗೆ ಮತ್ತು ಚರ್ಚ್​ಗಳಿಗೆ 5 ಕೋಟಿ ಬೇಕು ಎಂದು ಮುಖ್ಯಮಂತ್ರಿಗಳ ಬಳಿ ಕೇಳಿದ್ದೇನೆ

ಎಂದು ಶಾಸಕ ಉಮಾನಾಥ್​ ಕೋಟ್ಯಾನ್​ ಅವರು ಹೇಳಿದ್ದಾರೆ.

ಕಿನ್ನಿಗೋಳಿಯಲ್ಲಿ ಶಾಸಕರು ಮಾತಾಡುವ ವೇಳೆ ವೇದಿಕೆಯಲ್ಲಿ ಮುಸಲ್ಮಾನ ಮುಖಂಡರೂ ಇದ್ದರು.

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್​ಗಾಗಿ ಬಿಜೆಪಿ ಶಾಸಕ ಉಮಾನಾಥ್​ ಕೋಟ್ಯಾನ್​ ಮತ್ತು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್​ ಅವರ ನಡುವೆ ಪೈಪೋಟಿ ಇದೆ. ಒಂದು ವೇಳೆ ಕೋಟ್ಯಾನ್​ ಅವರಿಗೆ ಬಿಜೆಪಿ ನಿರಾಕರಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕ್ಷೇತ್ರದಲ್ಲಿದೆ.

ಇದರ ನಡುವೆ ಬಿಜೆಪಿ ಶಾಸಕರೇ ಬಿಜೆಪಿ ಪಕ್ಷದ ಮುಸಲ್ಮಾನ ವಿರುದ್ಧದ ನಿಲುವುಗಳನ್ನು ಬಹಿರಂಗವಾಗಿ ಖಂಡಿಸಿರುವುದು ಕರಾವಳಿ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here