BIG BREAKING: ಅದಾನಿಗೆ ಗುರುವಾರದ ಆಘಾತ: ತನಿಖೆಗೆ ಸುಪ್ರೀಂಕೋರ್ಟ್​ ಆದೇಶ

Forbes’ Real-Time Billionaires List

ಗುಜರಾತ್​ ಮೂಲದ ಉದ್ಯಮಿ ಗೌತಮ್​ ಅದಾನಿ ಮಾಲೀಕತ್ವದ ಅದಾನಿ ಕಂಪನಿಗಳ ಬಗ್ಗೆ ಹಿಂಡನ್​ಬರ್ಗ್​​ ಪ್ರಕಟಿಸಿರುವ ವರದಿ ಸಂಬಂಧ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ ನೀಡಿದೆ.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠ ತನಿಖೆಗೆ ಆದೇಶ ನೀಡಿದೆ.

ಭಾರತೀಯ ಷೇರು ನಿಯಂತ್ರಣ ಮಂಡಳಿ (SEBI) ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸುಪ್ರೀಂಕೋರ್ಟ್​ ಸಲ್ಲಿಸುವಂತೆ ಆದೇಶಿಸಲಾಗಿದೆ.

ತನಿಖೆ ಸಂಬಂಧ ಸುಪ್ರೀಂಕೋರ್ಟ್​ ಆರು ಮಂದಿ ಸದಸ್ಯರ ಸಮಿತಿಯನ್ನೂ ರಚಿಸಿದೆ.

ನಿವೃತ್ತ ನ್ಯಾಯಮೂರ್ತಿ ಅಭಯ್​ ಮನೋಹರ್​ ಸಪ್ರೆ ನೇತೃತ್ವದ ಸಮಿತಿಯಲ್ಲಿ ಓ ಪಿ ಭಟ್​, ನ್ಯಾಯಮೂರ್ತಿ ಜೆ ಪಿ ದೇವದತ್​, ಎಂ ವಿ ಕಾಮತ್​, ನಂದನ್​ ನಿಲೇಕಣಿ, ಸೋಮಶೇಖರನ್​ ಸುಂದರನ್​ ಸಮಿತಿಯ ಸದಸ್ಯರು.

ಈ ಸಮಿತಿ ಅದಾನಿ ವಿವಾದ ಬಗ್ಗೆ ತನಿಖೆ ನಡೆಸುವುದರ ಜೊತೆಗೆ ಷೇರು ಮಾರುಕಟ್ಟೆ ನಿಯಮಗಳನ್ನು ಬಲಗೊಳಿಸುವುದರ ಬಗ್ಗೆಯೂ ಸಲಹೆ ನೀಡುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here