ಗುಜರಾತ್ ಟೈಟನ್ಸ್ ಆಟಗಾರ ಶುಭ್ಮನ್ ಗಿಲ್ ಒಂದೇ ದಿನ 6 ದಾಖಲೆ ಸೃಷ್ಟಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗಿಲ್ ಶತಕ ಬಾರಿಸಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಗಿಲ್ ಗಳಿಸಿದ ಮೂರನೇ ಶತಕ ಇದು.
ಶುಕ್ರವಾರ ಅಹಮದಾಬಾದ್ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 60 ಎಸೆತಗಳಲ್ಲಿ ಗಿಲ್ 129 ರನ್ ಗಳಿಸಿದ್ದಾರೆ.
ಒಂದೇ ದಿನ ಗಿಲ್ ಸೃಷ್ಟಿಸಿದ 6 ದಾಖಲೆಗಳು:
1. 129 ರನ್ ಗಳಿಸುವ ಮೂಲಕ ಪ್ಲೇ ಆಫ್ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎಂಬ ಹೆಗ್ಗಳಿಕೆ. 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸಿಎಸ್ಕೆ ನಡುವಿನ ಪ್ಲೇ ಆಫ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು 122 ರನ್ ಗಳಿಸಿದ್ದರು. ಈ ಮೂಲಕ ಗಿಲ್ ಸೆಹ್ವಾಗ್ ದಾಖಲೆ ಮುರಿದಿದ್ದಾರೆ.
2. ಐಪಿಎಲ್ ಸರಣಿಯಲ್ಲೇ ಗಿಲ್ 2ನೇ ಅತ್ಯಧಿಕ ರನ್ ಗಳಿಸಿದ ಆಟಗಾರ. 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ 132 ರನ್ ಗಳಿಸಿದ್ದರು.
3. ನಿನ್ನೆ ನಡೆದ ಪಂದ್ಯದಲ್ಲಿ ಗಿಲ್ ಅವರು 10 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಮುರಿದಿದ್ದಾರೆ. ವೃದ್ಧಿಮಾನ್ ಸಾಹಾ, ಕ್ರಿಸ್ಗೇಲ್, ವೀರೇಂದ್ರ ಸೆಹ್ವಾಗ್, ಶ್ಯಾನ್ ವ್ಯಾಟ್ಸನ್ ಒಂದೇ ಪಂದ್ಯದಲ್ಲಿ ತಲಾ 8 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದರು.
4. ಗಿಲ್ ಮತ್ತು ಸಾಯಿ ಸುದರ್ಶನ್ ನಡುವಿನ 138 ರನ್ಗಳ ಜೊತೆಯಾದ ಐಪಿಎಲ್ ಪ್ಲೇ ಆಫ್ನಲ್ಲೇ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ.
5. ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಗಳಿಸಿರುವ ಮೂರನೇ ಆಟಗಾರ ಗಿಲ್. ಐಪಿಎಲ್ನಲ್ಲಿ ಗಿಲ್ 851 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 2016ರ ಸೀಸನ್ನಲ್ಲಿ 973 ರನ್ ಮತ್ತು ಜಾಸ್ ಬಟ್ಲರ್ 2022ರ ಸೀಸನ್ನಲ್ಲಿ 863 ರನ್ ಗಳಿಸಿದ್ದರು.
6. ಗಿಲ್ ಶತಕದ ಕಾರಣದಿಂದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಇದು ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್.
ಗೃಹಜ್ಯೋತಿ ಯೋಜನೆ ಸಂಬಂಧ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಬೆಂಗಳೂರಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ.
ಬಾಡಿಗೆದಾರರಿಗೂ ಗೃಹ ಜ್ಯೋತಿ ಲಭ್ಯ:
ಆಧಾರ್ ಕಾರ್ಡ್ ಸಂಖ್ಯೆಯನ್ನು ಆರ್ಆರ್ ನಂಬರ್ಗೆ ಲಿಂಕ್ ಮಾಡ್ಬೇಕು. ಬಾಡಿಗೆದಾರರಾಗಿದ್ದರೆ ಬಾಡಿಗೆ...
ಅರಬ್ಬಿ ಸಮುದ್ರದ ಗೋವಾ ಭಾಗದಲ್ಲಿ ರೂಪುಗೊಂಡಿರುವ ಬಿಪರ್ಜಾಯ್ ಹೆಸರಿನ ಚಂಡಮಾರುತ ಇವತ್ತು ಸಂಜೆ ವೇಳೆಗೆ ತೀವ್ರತೆಯನ್ನು ಪಡೆದುಕೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗಂಟೆಗೆ 80ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ...
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ರೀತಿಯ ಸ್ಥಿತಿಯಿಂದಾಗಿ ಮುಂದಿನ ನಾಲ್ಕು ದಿನ ಕರಾವಳಿ ಕರ್ನಾಟಲದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣದಿಂದ ದಕ್ಷಿಣ ಕನ್ನಡ,...
ವಿಲ್ ಅಥವಾ ಪವರ್ ಆಫ್ ಅಟಾರ್ನಿ (GPA)ಯನ್ನು ಸ್ಥಿರಾಸ್ತಿಯೊಂದರ ಮಾಲೀಕತ್ವದ ಹಸ್ತಾಂತರದ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ದಿಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರ...
ಬಡವರು,ಸಾಮಾನ್ಯರು, ವಲಸೆ ಕಾರ್ಮಿಕರು,ಮಧ್ಯಮವರ್ಗದ ವರ್ಗದ ಜನರು ರೈಲಿನಲ್ಲಿ ಪಯಣಿಸುವ ಜನರ್,ಸ್ಲೀಪರ್ ಕ್ಲಾಸ್ ಬೋಗಿಗಳ ವಿಚಾರದಲ್ಲಿ ರೈಲ್ವೇ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಯಾಣಿಕರು ಹೆಚ್ಚಾಗಿ ಓಡಾಡುವ ರೈಲುಗಳಲ್ಲಿಯೇ ಎಸಿ ಬೋಗಿಗಳನ್ನು ಸದ್ದಿಲ್ಲದೇ ಹೆಚ್ಚಿಸುತ್ತಿದೆ.ಜನರಲ್ ಬೋಗಿಗಳನ್ನು...
ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಈಗ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಮೂಲಗಳ ಮಾಹಿತಿ ಪ್ರಕಾರ ಈ ಬಾರಿ ಮಾಜಿ ಸಂಸದೆ, ನಟಿ ರಮ್ಯಾ ಅವರನ್ನೂ ಕಾಂಗ್ರೆಸ್ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ...
ಮೂರೂವರೆ ವರ್ಷಗಳ ಕಾಲ ಅಡ್ಡಾದಿಡ್ಡಿಯಾಗಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಮುಗ್ಗರಿಸಿತ್ತು. ಈ ಸೋಲಿನ ಆಘಾತದಿಂದ ಬಿಜೆಪಿಯಿನ್ನೂ ಚೇತರಿಸಿಕೊಂಡಿಲ್ಲ.
ಮುಖ್ಯಮಂತ್ರಿಗಾದಿಗೇರಿದ ಸಿದ್ದರಾಮಯ್ಯ ಹಂತ ಹಂತವಾಗಿ ಆಡಳಿತವನ್ನು ಸರಿಯಾದ ಹಳಿಗೆ ತರಲು ಶ್ರಮಿಸುತ್ತಿದ್ದಾರೆ. ಒಂದು...
ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಸೋಮಣ್ಣ ಅವರನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ...
ಫೇಸ್ಬುಕ್ನಲ್ಲಿ ಪರಿಚಯಯವಾದ ಯುವತಿಯೊಂದಿಗೆ ಸಲುಗೆಯಿಂದ ಮಾತಾಡಿದ ಸ್ವಾಮೀಜಿಯೊಬ್ಬರು 37 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಹಲವು ಬಾರಿ ಸ್ವಾಮೀಜಿಗೆ ವೀಡಿಯೋ ಕರೆ ಮಾಡಿದ್ದ ಅ ಯುವತಿ ಎಂದಿಗೂ ಮುಖ ತೋರಿಸಿರಲಿಲ್ಲ. ಕೈ ಕಾಲುಗಳನ್ನು ಮಾತ್ರ ತೋರಿಸಿ...
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆದೇಶ ಪ್ರಕಟಿಸಿದೆ.
ಕಾರ್ಡ್ನಲ್ಲಿರುವ ಯಜಮಾನಿಯೇ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ:
1. ಬಡತನ...