ಬೆಂಗಳೂರು ಸೇರಿ ದಕ್ಷಿಣ ಒಳನಾಡಿನನಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಆಗುತ್ತಿದೆ.(#KarnatakaRains) ಮಂದಿನ ಮೂರು ದಿನ ರಣ ಮಳೆ ಆಗುವ ಮುನ್ಸೂಚನೆ ಇದೆ. ಆದರೆ, ಈ ಬಗ್ಗೆ ಬೆಂಗಳೂರು ಹವಾಮಾನ ಕೇಂದ್ರದ (@metcentre_bng) ಟ್ವಿಟ್ಟರ್ ಮೀಡಿಯಾ ಹ್ಯಾಂಡಲ್ ಮಾಡುವ ಅಧಿಕಾರಿ ವರ್ಗ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
![](https://www.pratikshana.com/wp-content/uploads/2022/08/img_20220829_1034493388495617458406633-627x1024.jpg)
ಬದಲಿಗೆ ದೆಹಲಿಯ ಅಧಿಕಾರಿ ವರ್ಗಾವನ್ನು ಮೆಚ್ಚಿಸಲು, ಯಾವುದೊ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಿಂದಿಯಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media)ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
![](https://www.pratikshana.com/wp-content/uploads/2022/08/screenshot_2022_0829_1034262970381808016659266-648x1024.png)
ಹಳೇ ಮೈಸೂರು ಭಾಗದಲ್ಲಿ (Old Mysore Region) ಒಂದು ವಾರದಿಂದ ರಣ ಮಳೆ ಆಗುತ್ತಿದ್ದರೂ ಕೇವಲ ಎಲ್ಲೊ ಅಲರ್ಟ್ (Yellow Alert)ನೀಡುತ್ತಿರುವ ಬಗ್ಗೆ ಹವಾಮಾನದ ವಿಚಾರವಾಗಿ ವಿಶೇಷ ಒಲವು ಹೊಂದಿರುವ ಮೈಸೂರಿನ ಹವ್ಯಾಸಿ ಹವಾಮಾನ ತಜ್ಞ ರವಿಕೀರ್ತಿ ದತ್ತ (@ravikeerthi22)ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಡ್ ಅಲರ್ಟ್ ಏಕೆ ಪ್ರಕಟಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ವಾದಕ್ಕೆ ಪೂರಕವಾಗಿ ಹವಾಮಾನದ ಚಿತ್ರವನ್ನು ಲಾಗತ್ತಿಸಿದ್ದಾರೆ.
![](https://www.pratikshana.com/wp-content/uploads/2022/08/screenshot_2022_0829_103439242654180386765178-1024x365.png)
ಬೆಂಗಳೂರಿನ ಹವಾಮಾನ ಕೇಂದ್ರ (@metcentre_bng)ಹಿಂದಿಯಲ್ಲಿ ಟ್ವೀಟ್ (Hindi Tweet) ಮಾಡುವುದರಲ್ಲಿ ಬ್ಯುಸಿ ಇದೆ ಎಂದು ವ್ಯಂಗ್ಯ ಮಾಡಿದ್ದಾರೆ.
![](https://www.pratikshana.com/wp-content/uploads/2022/08/screenshot_2022_0829_103358575786521559060044-605x1024.png)
ಬೆಂಗಳೂರು ಹವಾಮಾನ ಕೇಂದ್ರ ದೇಶದಲ್ಲಿಯೇ ಅತ್ಯಂತ ಕೆಟ್ಟ ಕೇಂದ್ರ (Worst Centre)ಎಂದು ಕಿಡಿಕಾರಿದ್ದಾರೆ. ಕೇರಳ ಮತ್ತು ಚೆನ್ನೈನ ಹವಾಮಾನ ಕೇಂದ್ರಗಳನ್ನು ನೋಡಿ ಕಲಿಯಬೇಕು ಎಂದು ಬುದ್ದಿವಾದ ಹೇಳಿದ್ದಾರೆ.
ರವಿಕೀರ್ತಿ ದತ್ತ ( @ravikeerthi22 )ಅವರ ಟ್ವೀಟ್ ಬೆಂಬಲಿಸಿ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಹವಾಮಾನ ಕೇಂದ್ರದ ಹಿಂದಿ ಪ್ರೇಮದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.