ರಾಜ್ಯದಲ್ಲಿ ಆವರಿಸಿರೋ ಬರಗಾಲದ ಮಧ್ಯೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮನ್ಮುಲ್ ಪ್ರತಿ ಲೀಟರ್ ಹಾಲಿನ ಮೇಲೆ ಖರೀದಿ ದರವನ್ನು ಒಂದು ರೂಪಾಯಿ ಐವತ್ತು ಪೈಸೆಗೆ ಇಳಿಸಿ ರೈತರಿಗೆ ಶಾಕ್ ಕೊಟ್ಟಿದೆ.
ಮಂಡ್ಯ ಹಾಲು ಒಕ್ಕೂಟದ ಈ ನಿರ್ಧಾರದಿಂದ ಈಗಾಗಲೇ ಬರದಿಂದ ಕಂಗೆಟ್ಟಿರುವ ರೈತರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಒಂದೆಡೆ ಬೆಳೆಗಳಿಗೆ ಸೂಕ್ತ ನೀರಾವರಿ ಇಲ್ಲದೆ ಈಗಾಗಲೇ ಸಂಕಷ್ಟದಲ್ಲಿದ್ದಾನೆ, ಮತ್ತೊಂದೆಡೆ ರಾಸುಗಳ ಮೇವು ಪ್ರತಿ ಚೀಲಕ್ಕೆ 50 ರೂ.ಏರಿಕೆಯಾಗಿದೆ, ಇದೀಗ ಪ್ರತಿ ಲೀಟರ್ ಗೆ 33ರೂಪಾಯಿ.50 ಪೈಸೆ ನೀಡುತ್ತಿದ್ದ ಮನ್ಮುಲ್ ಈಗ 32 ರೂಪಾಯಿ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಬರದ ನಡುವೆಯೂ ಹಾಲಿನ ದರ ಇಳಿಕೆ ಮಾಡಿರುವುದಕ್ಕೆ ಮನ್ಮುಲ್ ಆಡಳಿತ ಮಂಡಳಿ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ದರ ಹೆಚ್ಚಳ ಮಾಡದಿದ್ದರೇ ಬೀದಿಗಿಳಿದು ಹೋರಾಟ ಮಾಡೋದಾಗಿಯೂ ಎಚ್ಚರಿಕೆ ನೀಡಿದ್ದಾರೆ.