ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ ವ್ಯಕ್ತಪಡಿಸಿದ್ದಾರೆ.
`ಹೀಗೆ ಅವಮಾನ ಮಾಡಬಾರದಿತ್ತು ಸಾರ್, ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು’ ಎಂದು ಮಂಗಳಮುಖಿ ಸಮುದಾಯವನ್ನು ಅವಹೇಳನ ಮಾಡಿದ ಸಿ ಎಂ ಇಬ್ರಾಹಿಂ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಕೂಡ ಹಿಂಗೆ ಹೇಳಿದ್ರು-ಗಂಡಾಗಿದ್ರೆ ಕೆಲ್ಸ ಕೊಡುಸ್ತಿದ್ದೆ, ಹೆಣ್ಣಾಗಿದ್ರೆ ಮದ್ವಿ ಮಾಡಿಸ್ತಿದ್ದೆ, ಕುರುಡ ಕುಂಟ ಆಗಿದ್ರೆ ಮನಿಯಾಗ ಕೂಡ್ಸಿ ಊಟ ಹಾಕ್ತಿದ್ದೆ.
ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮಗೆ.
ಹೀಗೆ ಅವಮಾನ ಮಾತಾಡಬಾರದಿತ್ತು ಸಾರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು!
ಎಂದು ಪದ್ಮಶ್ರೀ ಗೌರವ ಗಳಿಸಿರುವ ಮಂಜಮ್ಮ ಜೋಗತಿ ಅವರು ಟ್ವೀಟಿಸಿದ್ದಾರೆ.