ವಿಧಾನಸಭೆ ಚುನಾವಣಾ ರಾಜಕೀಯ ರಾಜ್ಯದಲ್ಲಿ ಶುರುವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪರಿಣಾಮ ಅಲ್ಲಿ ಜೆಡಿಎಸ್ ತನ್ನ ಗೇಮ್ ಶುರು ಮಾಡಿದೆ. ಸಾರ್ವಜನಿಕ ವೇದಿಕೆಯಲ್ಲಿ GT ದೇವೇಗೌಡರಿಗೆ ಮುಜುಗರ ಉಂಟು ಮಾಡಲು ನೋಡಿದೆ.
ಜಯಪುರದ ಸೋಲಿಗರ ಕಾಲೋನಿಯಲ್ಲಿ
ಕಾಳಮ್ಮ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ GTD ವಿರುದ್ಧ ಅದೇ ವೇದಿಕೆಯಲ್ಲಿ JDS ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಗುಡುಗಿದ್ದಾರೆ.
ಕಾಳಮ್ಮ ದೇವಸ್ಥಾನ ನಿರ್ಮಾಣಕ್ಕೆ ಆಗುವಷ್ಟು ಕೂಲಿಯನ್ನು ಶಾಸಕರು ನೀಡಿಲ್ಲ. 250 ಜನ ಇರುವ ಊರಿಗೆ 70 ಲಕ್ಷ ಕೊಡೋಕೆ ಆಗುತ್ತಾ ಸಿದ್ದೇಗೌಡ ಎಂದು ಕೇಳಿದ್ದರು. ಕಾಳಮ್ಮನಾ ತಾಯಾಣೆ ಇದು ಸತ್ಯ. ಗ್ರಾಮದ ಜನ ಈ ಸತ್ಯನ ತಿಳಿದುಕೊಳ್ಳಬೇಕು. ಇದನ್ನು ನಾನು ಕದ್ದು ಮುಚ್ಚಿ ಹೇಳ್ತಿಲ್ಲ. ಶಾಸಕರ ಮುಂದೆಯೇ ಹೇಳ್ತಾ ಇದ್ದೇನೆ.
ಶಾಸಕರು ಕೊರೋನಾ ಸಮಯದಲ್ಲಿ ಜನರ ಕಷ್ಟ ಸುಖ ವಿಚಾರಿಸಿಲ್ಲ. ಸತ್ತವರ ಮನೆಗೆ ಭೇಟಿ ನೀಡಿ ದುಡ್ಡು ಕೊಟ್ಟಿಲ್ಲ ಎಂದು GTD ವಿರುದ್ಧ ಅದೇ ವೇದಿಕೆಯಲ್ಲಿ JDS ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಆರೋಪಿಸಿದರು.
ಈ ಸಂದರ್ಭದಲ್ಲಿ GTD ಮತ್ತು ಹರೀಶ್ ಗೌಡ ಮೌನವಾಗಿ ಕುಳಿತಿದ್ದರು. ಆದರೆ, GTD ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಗ್ರಾಮಕ್ಕೆ ಶಾಸಕರು ಅನೇಕ ಕೆಲಸ ಮಾಡಿದ್ದಾರೆ, ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕೊನೆಗೆ ಆಕ್ರೋಶದ ಬಿಸಿ ತಾಳಲಾಗದೆ ಮಾವಿನಹಳ್ಳಿ ಸಿದ್ದೇಗೌಡ ಕಾರ್ಯಕ್ರಮದಿಂದಲೇ ನಿರ್ಗಮಿಸಿದ್ದಾರೆ.