ಸುಮಾರು ರೂ. 1,034 ಕೋಟಿ ಮೌಲ್ಯದ ಪತ್ರ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಜಪ್ತಿ ಮಾಡಿದೆ.
ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ರೂ. 9 ಕೋಟಿ ಮೌಲ್ಯದ ಭೂಮಿ ಮತ್ತು ದಾದರ್ ಉಪನಗರದಲ್ಲಿರುವ ರೂ. 2 ಕೋಟಿ ಮೌಲ್ಯದ ಫ್ಲ್ಯಾಟ್ ಜಪ್ತಿಯಾಗಿವೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ.
#WATCH "… I'm not one to get scared, seize my property, shoot me, or send me to jail, Sanjay Raut is Balasaheb Thackeray's follower & a Shiv Sainik, he'll fight & expose everyone. I'm not one to stay quiet, let them dance. The truth will prevail": Shiv Sena leader Sanjay Raut pic.twitter.com/UzIdBKN9mc
— ANI (@ANI) April 5, 2022
ಇಡಿಯಿಂದ ಆಸ್ತಿ ಜಪ್ತಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಆಸ್ತಿ ಜಪ್ತಿ ಮಾಡಲಿ, ನನನ್ನೂ ಶೂಟ್ ಮಾಡಲಿ ಅಥವಾ ಜೈಲಿಗೆ ಹಾಕಲಿ ನಾನು ಯಾರಿಗೂ ಹೆದರುವವನಲ್ಲ, ಸಂಜಯ್ ರಾವತ್ ಬಾಳ ಸಾಹೇಬ್ ಠಾಕ್ರೆ ಅನುಯಾಯಿ, ಶಿವ ಸೈನಿಕ. ಹೋರಾಡಿ ಎಲ್ಲವನ್ನೂ ಹೊರಗೆ ತರುತ್ತೇನೆ. ನಾನು ಸುಮ್ಮನಿರುವುದಿಲ್ಲ. ಸತ್ಯಾಂಶ ಹೊರಗೆ ಬರಲಿದೆ ಎಂದು ಗುಡುಗಿದ್ದಾರೆ.
https://youtu.be/EUIM77eYHk0