ADVERTISEMENT
ವರದಿ: ಶ್ರೇಯಸ್ ಮೂಡಕೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಿ ಸಿ ರೋಡ್ನಲ್ಲಿ ಭಾರೀ ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಬಿ ಸಿ ರೋಡ್ ಜಂಕ್ಷನ್ನಲ್ಲಿ ಟ್ರಕ್ ಚಾಲಕ ಮೂರ್ಛೆ ಹೋದ ಕಾರಣ ಲಾರಿ ಇದ್ದಕಿದ್ದಂತೆ ಚಲಿಸಿ ನ್ಯಾನೋ ಕಾರಿಗೆ ಡಿಕ್ಕಿ ಹೊಡೆದಿದೆ.
ಜಂಕ್ಷನ್ನಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಿಕೊಳ್ಳುವ ವೇಳೆ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಪ್ರಾಣಹಾನಿ ಆಗಿಲ್ಲ.
ADVERTISEMENT