ಅದು 2014ರ ಎಲೆಕ್ಷನ್ ದಿನಗಳು.. ತೈಲ ಬೆಲೆ ಏರಿಕೆ ವಿರೋಧಿಸಿ ಬಾಬಾ ರಾಮದೇವ್ ಅಬ್ಬರಿಸಿ ಬೋಬ್ಬಿರಿದಿದ್ದರು. 40 ರುಪಾಯಿಗೆ ಪೆಟ್ರೋಲ್ ಕೊಡುವ, 300 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಡುವ ಸರ್ಕಾರ ಈ ದೇಶಕ್ಕೆ ಬೇಕಾಗಿದೆ ಎಂದು ಯುಪಿಎ ಸರ್ಕಾರದ ವಿರುದ್ಧ ಗುಡುಗಿದ್ದರು. ಚುನಾವಣೆ ಮುಗಿದ ಮೇಲೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದಾಗಿ ಎಂಟು ವರ್ಷ ಕಳೆಯಿತು. ಪೆಟ್ರೋಲ್ ಬೆಲೆ 40 ಅಲ್ಲ, ನೂರು ರೂಪಾಯಿ ದಾಟಿದರೂ ಈ ಅವಧಿಯಲ್ಲಿ ಒಮ್ಮೆಯೂ ಬಾಬಾ ರಾಮ್ ದೇವ್ ತೈಲ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಬದಲಾಗಿ ಸದ್ದಿಲ್ಲದೇ ತಮ್ಮ ಪತಂಜಲಿ ಸಾಮ್ರಾಜ್ಯ ವಿಸ್ತರಿಸಿದರು.
ಈಗ ಇವತ್ತಿನ ವಿಷಯಕ್ಕೆ ಬರೋಣ.. ಹರಿಯಾಣದ ಕರ್ನಾಲ್ ನಲ್ಲಿ ಬಾಬಾ ರಾಮದೇವ್ ಗೆ ಸರಿಯಾದ ಪತ್ರಕರ್ತರೊಬ್ಬರು ಎದುರಾದರು. ಏನ್ ಸ್ವಾಮಿ, ಬೆಲೆ ಏರಿಕೆ ಬಗ್ಗೆ ಏನಂತೀರಾ ಎಂದು ಪ್ರಶ್ನೆ ಮಾಡಿದರು. ಹಿಂದೆ ನೀವು 40 ರುಪಾಯಿಗೆ ಪೆಟ್ರೋಲ್ ಕೊಡುವ, 300 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಡುವ ಸರ್ಕಾರ ಈ ದೇಶಕ್ಕೆ ಬೇಕಾಗಿದೆ ಅಂದಿದ್ರಲ್ಲ ಎಂಬ ಪ್ರಶ್ನೆ ತೂರಿಬರುತ್ತಲೇ ಬಾಬಾಗೆ ಸರ್ ಅಂತಾ ಸಿಟ್ಟು ನೆತ್ತಿಗೆರಿತ್ತು.
ಹೌದು ಏನ್ ಇವಾಗ? ಏನೋ ಮಾಡ್ತೀಯಾ? ನನ್ನತ್ರ ಇಂಥಾ ಪ್ರಶ್ನೆ ಕೇಳೋಕೆ ಬರ್ಬೇಡ.. ನಾನೇನು ನಿಂಗೆ ಉತ್ತರ ಕೊಡೋಕೆ ನೀನು ನನ್ನ ಕಂಟ್ರಾಕ್ಟರ್ ಅಲ್ಲ ಅಂತಾ ಬಾಬಾ ರಾಮದೇವ್ ಹೇಳಿದರು. ಆದರೇ, ಪತ್ರಕರ್ತ ಸುಮ್ಮನಾಗದೆ ಮತ್ತದೇ ಪ್ರಶ್ನೆ ಕೇಳಿದರು. ಆಗ ನೋಡಿ ಬಾಬಾ ರಾಮದೇವ್ ಮತ್ತಷ್ಟು ತಾಳ್ಮೆ ಕಳೆದುಕೊಂಡರು. ಹೌದು ನಾನು ಆ ಮಾತು ಹೇಳಿದ್ದೆ.. ಏನೀಗ? ಬಾಯ್ಮುಚ್ಚು.. ಇಲ್ಲ ಅಂದರೆ ಸರಿ ಇರಲ್ಲ.. ಪದ್ಧತಿಯಾಗಿರು.. ಮತ್ತೆ ಮತ್ತೆ ಅದನ್ನು ಕೇಳ್ಬೇಡ.. ಒಳ್ಳೆ ಕುಟುಂಬದಿಂದ ಬಂದಂತೆ ಇದೀಯ..ಎಂದು ಬಾಬಾ ರಾಮ್ದೇವ್ ಗರಂ ಆದರು.
ಸತತವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡುವುದು ಬಿಟ್ಟು, ಇಂಥಾ ಕಠಿಣ ಸನ್ನಿವೇಶದಲ್ಲಿ ದೇಶದ ಜನತೆ ಕಷ್ಟಪಟ್ಟು ಕೆಲಸ ಮಾಡಬೇಕು ಬಾಬಾ ಕರೆ ನೀಡಿದರು.
ತೈಲ ದರ ಕಡಿಮೆ ಮಾಡಿದರೆ, ತೆರಿಗೆ ಸಂಗ್ರಹ ಕಡಿಮೆ ಆಗುತ್ತದೆ. ತೆರಿಗೆ ಸಂಗ್ರಹ ಕಡಿಮೆಯಾದರೆ ಅಭಿವೃದ್ದಿ ಕೆಲಸ, ರಸ್ತೆ ಅಭಿವೃದ್ಧಿ ಹೇಗೆ ಮಾಡಬೇಕು.. ಸಂಬಳ ಹೇಗೆ ನೀಡಬೇಕು.. ದೇಶ ಹೇಗೆ ನಡೆಸಬೇಕು ಎಂದು ಸರ್ಕಾರ ಕೇಳುತ್ತದೆ. ಏನು ಮಾಡುವ ಎಂದು ಜನರನ್ನೇ ಬಾಬಾ ರಾಮದೇವ್ ಪ್ರಶ್ನೆ ಮಾಡಿದ್ದಾರೆ.
ಅಸಲಿಗೆ ಹಣದುಬ್ಬರ ಇಳಿಯಬೇಕು.. ಸಧ್ಯಕ್ಕೆ ಜನ ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ರಾತ್ರಿ ಹತ್ತು ಗಂಟೆಯವರೆಗೂ ಕೆಲಸ ಮಾಡುತ್ತೇನೆ ಎಂದು ಬಾಬಾ ರಾಮದೇವ್ ಹೇಳಿಕೊಂಡಿದ್ದಾರೆ.
ಆದರೇ ಅಪ್ಪಿತಪ್ಪಿಯು ಬಾಬಾ ಬಾಯಿಂದ ತೈಲ ಬೆಲೆ ಏರಿಕೆ ವಿರುದ್ಧ ಒಂದೇ ಒಂದು ಪದವೂ ಹೊರಹೊಮ್ಮಲಿಲ್ಲ.