ಮರಗಳ್ಳರ ವಿರುದ್ಧ ಕ್ರಮ ತೆಗೆದುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ವಿರುದ್ಧ ಬೆಳ್ತಂಗಡಿ ಶಾಸಕ
ಹರೀಶ್ ಪೂಂಜಾ ದ್ವೇಷ ಸಾಧಿಸಿ, ವರ್ಗ ಮಾಡಿಸಿದ ಆರೋಪ ಕೇಳಿ ಬಂದಿದೆ.
![](https://www.pratikshana.com/wp-content/uploads/2022/01/img-20220129-wa0008206842560849072579-1024x470.jpg)
ಶಾಸಕರು ಮರಗಳ್ಳರಿಗೆ ಬೆಂಬಲಿಸಿ ದ್ವೇಷದಿಂದ ವರ್ಗ ಮಾಡಿಸಿದ್ದಾರೆ ಎಂದು ಸ್ವತಃ ಸಂಧ್ಯಾ ಸಚಿನ್ ಆರೋಪ ಮಾಡಿದ್ದಾರೆ. ಬಿಲ್ಲವ ಸಮಾಜದವರಾದ ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಬೆಳ್ತಂಗಡಿಯ ಗುರು ನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಸಂಧ್ಯಾ ಸಚಿನ್ ಪತ್ರ ಬರೆದಿದ್ದಾರೆ.
![](https://www.pratikshana.com/wp-content/uploads/2022/01/img-20220129-wa00108576902730322977700-680x1024.jpg)
ವೈಯಕ್ತಿಕ ದ್ವೇಷದಿಂದ ಮಾಡಿಸಿರುವ ವರ್ಗಾವಣೆ ಏಕಪಕ್ಷೀಯ ಆದೇಶವಾಗಿದೆ ಎಂದು ನೊಂದ ಅಧಿಕಾರಿ ಆರೋಪ ಮಾಡಿದ್ದಾರೆ.
![](https://www.pratikshana.com/wp-content/uploads/2022/01/img-20220129-wa00158036803561810103339-1024x1024.jpg)
ಪ್ರಭಾರ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ರನ್ನು ದಕ್ಷಿಣ ಕನ್ನಡದಿಂದ ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಹರೀಶ್ ಪೂಂಜಾ ಪತ್ರ ಬರೆದಿದ್ದರು. ಹರೀಶ್ ಪೂಂಜಾ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆಯ ಸಹಿ ಹಾಕಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
![](https://www.pratikshana.com/wp-content/uploads/2022/01/img-20220129-wa00096397054920903793456-605x1024.jpg)
ಶಾಸಕ ಹರೀಶ್ ಪೂಂಜಾ ಪತ್ರ ವೈರಲ್ ಆಗುತ್ತಿದ್ದಂತೆ, ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
![](https://www.pratikshana.com/wp-content/uploads/2022/01/img-20220129-wa00115971383191145188016-578x1024.jpg)