ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಭ್ರಷ್ಠಾಚಾರ ನಿಯಂತ್ರಣಕ್ಕಾಗಿ ಪಂಜಾಬ್ನ ನೂತನ ಸಿಎಂ ಎಎಪಿಯ ಭಗವಂತ್ ಮನ್ ಅವರು ಮೊದಲ ಹೆಜ್ಜೆಯಿಟ್ಟಿದ್ದಾರೆ.
ಪಂಜಾಬ್ನಲ್ಲಿ ಮೊದಲ ಬಾರಿಗೆ ಎಎಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿದೆ. ಆ ಮೂಲಕ ಕಾಂಗ್ರೆಸ್ನ್ನು ಹಿಂದಿಕ್ಕಿ ಪಂಜಾಬ್ನಲ್ಲಿ ಎಎಪಿ ಅಧಿಕಾರವನ್ನು ಮುಡಿಗೇರಿಸಿಕೊಂಡಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಭಗವಂತ್ ಮನ್ ಅವರು ಮೊದಲ ಹೆಜ್ಜೆಯಲ್ಲಿಯೇ ಭ್ರಷ್ಠಾಚಾರ ನಿಯಂತ್ರಣಕ್ಕೆ ಪಣತೊಟ್ಟಿದ್ದಾರೆ.
ಮಾರ್ಚ್ 23 ರಂದು ಶಹೀದ್ ದಿನದಂದು ವಾಟ್ಸಾಪ್ ಮೂಲಕ ದೂರು ನೀಡಲು ಸಾಧ್ಯವಾಗುವಂತೆ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಪಂಜಾಬ್ನ ಹೊಸ ಸಿಎಂ ಭಗವಂತ್ ಮಾನ್ ಘೋಷಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಮಾರ್ಚ್ 23 ರಂದು, ಶಹೀದ್ ದಿವಸ್ ನಾನು ಸಹಾಯವಾಣಿಯನ್ನು ಪ್ರಾರಂಭಿಸುತ್ತೇನೆ ಅದು ನನ್ನ ವೈಯಕ್ತಿಕ ವಾಟ್ಸಾಪ್ ಸಂಖ್ಯೆಯಾಗಿದೆ. ಪಂಜಾಬ್ನಲ್ಲಿ, ಯಾರಾದರೂ ನಿಮ್ಮಿಂದ ಲಂಚವನ್ನು ಕೇಳಿದರೆ, ನಿರಾಕರಿಸಬೇಡಿ, ವೀಡಿಯೊ/ಆಡಿಯೋ ರೆಕಾರ್ಡಿಂಗ್ ಮಾಡಿ ಮತ್ತು ಅದನ್ನು ಆ ಸಂಖ್ಯೆಗೆ ಕಳುಹಿಸಿ. ನನ್ನ ಕಚೇರಿ ತನಿಖೆ ನಡೆಸುತ್ತದೆ ಮತ್ತು ಯಾವುದೇ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದಿದ್ದಾರೆ.
Punjab's new CM Bhagwant Mann announces that an anti-corruption helpline will be launched on 23rd March, Shaheed Diwas. People of the state will be able to lodge complaints on corruption via WhatsApp. pic.twitter.com/RD6qo19PPs
— ANI (@ANI) March 17, 2022
ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ಭ್ರಷ್ಠಾಚಾರದ ವಿರುದ್ಧ ದೂರು ನೀಡುವಂತ ವ್ಯವಸ್ಥೆಯನ್ನು ಪಂಜಾಬ್ನ ನೂತನ ಸಿಎಂ ಭಗವಂತ್ ಮನ್ ಮಾಡಿದ್ದಾರೆ. ಈ ಕಾರ್ಯಕ್ಕೆ ಪ್ರಂಜಾಬ್ನ ಜನ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು, ಈ ಭ್ರಷ್ಠಾಚಾರ ವಿರೋಧಿ ಸಹಾಯವಾಣಿ ಎಷ್ಠರ ಮಟ್ಟಿಗೆ ಕಾರ್ಯನಿರ್ವಹಿಸಲು ಶಕ್ತವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.