ಪಾವಗಡ ತಾಲ್ಲೂಕಿನ ಪಳವಳ್ಳಿ ಕೆರೆ ಕಟ್ಟೆ ಮೇಲೆ ಭೀಕರ ಅಪಘಾತ ಸಂಭವಿಸಿದೆ.
ಕೆರೆಗೆ ಬಸ್ ಪಲ್ಟಿ ಹೊಡೆದು ಆರು ಪ್ರಯಾಣಿಕರು ಬಲಿ ಆಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ಬೆಳಗ್ಗೆ ಕಾಲೇಜ್ ಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.
![](https://www.pratikshana.com/wp-content/uploads/2022/03/img-20220319-wa00084165652742799043202-1024x461.jpg)
ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಂಭವ ಇದೆ.
![](https://www.pratikshana.com/wp-content/uploads/2022/03/img-20220319-wa00065119063455920665671-1024x461.jpg)
ಬೆಳಗ್ಗೆ 9 ಗಂಟೆ ಸುಮಾರಿಗೆ SVT ಬಸ್ ವೈ ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತಿದ್ದಾಗ ಈ ಅನಾಹುತ ಸಂಭವಿಸಿದೆ.
ಮೃತ ದೇಹಗಳುಸೀಮೆ ಜಾಲಿ ಗಿಡಗಳ ಅಡಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಗಾಯಳುಗಳ ನರಳಾಟ ಮುಗಿಲು ಮುಟ್ಟಿತ್ತು ಎಂದು ಸ್ಥಳಕ್ಕೆ ಭೇಟಿ ಕೊಟ್ಟ ಪೊನ್ನಸಮುದ್ರದ ರಂಜಿತ್ ಮಾಹಿತಿ ನೀಡಿದ್ದಾರೆ.
![](https://www.pratikshana.com/wp-content/uploads/2022/03/img-20220319-wa00102869153332893215143-1024x461.jpg)
ಬಸ್ಸಿನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂಬುದಾಗಿ ತಿಳಿದುಬಂದಿದೆ.
ಬಸ್ ನಲ್ಲಿದ್ದ ಗಾಯಾಳು ಮಹಿಳೆ ನೀಡಿದ ಮಾಹಿತಿ ಪ್ರಕಾರ, ಚಾಲಕನದ್ದೇ ತಪ್ಪು.. ಓವರ್ ಸ್ಪೀಡ್ ನಿಂದ ಈ ಅನಾಹುತ ಸಂಭವಿಸಿದೆ.