ಹಳೆ ದ್ವೇಷದ ಹಿನ್ನೆಲೆಯಲ್ಲಿ 25 ವರ್ಷದ ದಲಿತ ಯುವಕನೊಬ್ಬನನ್ನು ಅಪಹರಿಸಿದ ಎಂಟು ಮಂದಿ ದುಷ್ಕರ್ಮಿಗಳು, ಆತನ ಮೇಲೆ ಹಲ್ಲೆ ನಡೆಸಿ, ಬಲವಂತದಿಂದ ಮೂತ್ರ ಕುಡಿಸಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜನವರಿ 26 ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮನೆಯಿಂದ ತನನ್ನು ಅಪಹರಿಸಿ, ಕಾರೊಂದರಲ್ಲಿ ಹೊಲದ ಹತ್ತಿರ ಕರೆದೊಯ್ದು ಮೂತ್ರ ವಿಸರ್ಜಿಸಿದ ಬಾಟಲಿನಲ್ಲಿದ್ದ ಮದ್ಯವನ್ನು ಕುಡಿಸಿದ್ದಾರೆ ಎಂದು ರುಖಾಸಾರ್ ಗ್ರಾಮದ ನಿವಾಸಿ ರಾಕೇಶ್ ಮೇಘಾವಾಲ್ ಜನವರಿ 27 ರಂದು ರತ್ನಗಢ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾನೆ.
ಆರೋಪಿಗಳು ತಮ್ಮ ಜಾತಿ ನಿಂದನೆ ಮಾಡಿರುವುದಾಗಿ ರಾಕೇಶ್ ಮೇಘವಾಲ್ ಆರೋಪಿಸಿದ್ದು, ದಾಳಿಯಿಂದಾಗಿ ಆತನ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಆಗಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್, ಬೀರಬಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರು ತಲೆ ಮರೆಸಿಕೊಂಡಿರುವುದಾಗಿ ತನಿಖಾಧಿಕಾರಿ ಹಿಮಾನ್ಸ್ ಶರ್ಮಾ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143 ( ಕಾನೂನುಬಾಹಿರವಾಗಿ ಸೇರುವುದು) 323( ಸ್ವಯಂ ಪ್ರೇರಿತರಾಗಿ ಅವಮಾನ) 365( ಅಪಹರಣ) ಮತ್ತು 382( ಸಾವಿಗೆ ಸಂಚಿನ ನಂತರ ಕಳವು) ಮತ್ತು ಪರಿಶಿಷ್ಟ ಜಾತಿ, ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
https://youtu.be/L6hqk4DN-X8