Saturday, July 27, 2024

ಡಿಸಿಪಿ ಕಾರಿಗೆ ಗುದ್ದಿದ ಜಾಗ್ವಾರ್ ಕಾರು – ಪೇಟಿಎಂ ಮಾಲೀಕ ಬಂಧನ, ಬಿಡುಗಡೆ

ಪೊಲೀಸ್ ಅಧಿಕಾರಿಯ ಗುದ್ದಿದ ಪೇಟಿಎಂ ಮಾಲೀಕ ವಿಜಯ್ ಶೇಖರ್ ಶರ್ಮಾರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಲಾಗಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಫೆಬ್ರವರಿ 22ರಂದು ದೆಹಲಿಯ ಅರಬಿಂದೋ ಮಾರ್ಗದಲ್ಲಿರುವ ದಿ ಮರ‍್ಸ್ ಇಂಟರ್ ನ್ಯಾಷನಲ್ ಶಾಲೆಯ ಬಳಿ ಪೇಟಿಎಂ ಸಿಇಒ ಓಡಿಸ್ತಿದ್ದ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ದೆಹಲಿ ದಕ್ಷಿಣ ಡಿಸಿಪಿ ಬೆನಿತಾ ಮೇರಿ ಜೈಕರ್ ಕಾರಿಗೆ ಗುದ್ದಿದೆ.

ಡಿಸಿಪಿ ಕಾರಿನ ಚಾಲಕ ಕಾನ್ಸ್ ಸ್ಟೇಬಲ್ ದೀಪಕ್ ಕುಮಾರ್ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಡಿಸಿಪಿ ಕಾರನ್ನು ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕ್‌ಗೆ ತೆಗೆದುಕೊಂಡು ಹೋಗಲಾಗಿತ್ತು. ಆಗ ಬದಿಯಲ್ಲಿ ನಿಲ್ಲಿಸಿದ್ದ ಡಿಸಿಪಿ ಕಾರಿಗೆ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಆ ಬಳಿಕ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಕಾರನ್ನು ಪತ್ತೆ ಹಚ್ಚಿದರು. ಅದು ಹರಿಯಾಣದ ನೋಂದಣಿ ಸಂಖ್ಯೆ ಹೊಂದಿತ್ತು ಮತ್ತು ಗುರುಗ್ರಾಮದಲ್ಲಿರುವ ಕಂಪನಿಗೆ ಸಂಬAಧಿಸಿದ್ದು ಎಂದು ತಿಳಿಯಿತು ಎಂದು ಪೊಲೀಸ್ ಕಾನ್ಸ್ ಸ್ಟೇಬಲ್ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

 

error: Content is protected !!