ಬೆಳಗಾವಿ: ಇಂದಿನಿಂದ ಬೆಳಗಾವಿ ಸುರ್ಣಸೌಧದಲ್ಲಿ 16ನೇ ಚಳಿಗಾಲದ ಮೊದಲ ಅಧಿವೇಶನ ಆರಂಭಗೊಳ್ಳಲಿದೆ. ಬೆಳಗ್ಗೆ 11 ಗಂಟೆ ಉಭಯ ಸದನಗಳು ಆರಂಭವಾಗಲಿದೆ. ಸರ್ಕಾರ ಮೇಲೆ ಮುಗಿಬೀಳಲು ಬಿಜೆಪಿ – ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ
ವಿರೋಧ ಪಕ್ಷಗಳ ಆರೋಪಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಕೂಡ ತಯಾರಿ ನಡೆಸಿದ್ದಾರೆ.ಬಿಜೆಪಿ- ಜೆಡಿಎಸ್ ಬಳಿ ಇರುವ ಬ್ರಹ್ಮಾಸ್ತ್ರಗಳು ಹಾಗೂ ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಪಂಚ ಗ್ಯಾರಂಟಿಗಳ ವೈಫಲ್ಯ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪ .IT ದಾಳಿಯಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ
ಡಿಸಿಎಂ ಡಿಕೆಶಿ CBI ಕೇಸ್ ವಾಪಸ್ ಪಡೆದ ಪ್ರಕರಣ.ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ಆರೋಪ.ಉಭಯ ಸದನಗಳಲ್ಲಿ ಜಾತಿಗಣತಿ ವರದಿ ಜಾರಿ ಬಗ್ಗೆಯೂ ಚರ್ಚೆ.ಸಚಿವ ಜಮೀರ್ ಅಹ್ಮದ್ ಸ್ಪೀಕರ್ ವಿಚಾರವಾಗ ಹಿಂದೂ ವಿರೋಧಿ ಹೇಳಿಕೆ ವಿಚಾರವಾಗಿ ಚರ್ಚೆ..?
ಅಭಿವೃದ್ಧಿ ಕುಂಟಿತ, ಶಾಸಕರ ಅನುಧಾನ ತಾರತಮ್ಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಡಿ. 6 ರಂದು CLP ಮೀಟಿಂಗ್ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ.
ವಿರೋದ ಪಕ್ಷಗಳ ಆರೋಪಕ್ಕೆ ಯಾವ ರೀತಿ ಉತ್ತರ ಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.