ಶಿವಮೊಗ್ಗ ಜಿಲ್ಲೆಯ ವಡನ್ಬೈಲ್ ಪದ್ಮಾವತಿ ಬಸದಿ ಗುರುಗಳಾದ ಧರ್ಮದರ್ಶಿ ಹೆಚ್ ಕೆ ವೀರರಾಜ್ ಜೈನ್ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸಹೋದರ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜೋಗ ಮತ್ತು ಕಾರ್ಗಲ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಮತ್ತು ಗುರುಗಳು ಪ್ರಯಾಣಿಸುತ್ತಿದ್ದ ಒಮಿನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಗುರುಗಳಾದ ವೀರರಾಜ್ ಜೈನ್ ಅವರಿಗೆ ಗಂಭೀರ ಪೆಟ್ಟುಬಿದ್ದಿದೆ. ಇವರಿಗೆ 75 ವರ್ಷ ವಯಸ್ಸು. ಇವರ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಶಿಮಮೊಗ್ಗ ಜಿಲ್ಲೆಯ ಜೋಗಫಾಲ್ಸ್ನಿಂದ 8 ಕಿಲೋ ಮೀಟರ್ ದೂರದಲ್ಲಿರುವ ಶಕ್ತಿ ದೇವತೆ ವಡನ್ಬೈಲ್ ಪದ್ಮಾವತಿ ಬಸದಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.
ಹಾವಿನ ಹುತ್ತದಿಂದ ಒಳಗೊಂಡಿರುವ ಬಸದಿ ಇಲ್ಲಿಯ ವಿಶೇಷ. ವಡನ್ಬೈಲ್ ಪದ್ಮಾವತಿಗೆ ಬಳೆ ಹರಕೆ ಕೊಡುವುದು ಪ್ರಮುಖ ವಿಶೇಷ. ಹೀಗಾಗಿ ಈ ದೇವಿಯನ್ನು ಬಳೆ ಪದ್ಮಾವತಿ ಎಂದೂ ಭಕ್ತರು ಪೂಜಿಸುತ್ತಾರೆ.
ಆರಂಭದಲ್ಲಿ ನಾಸ್ತಿಕರಾಗಿದ್ದ ವೀರರಾಜ್ ಜೈನ್ ಅವರು 1965ರಲ್ಲಿ ಪದ್ಮಾವತಿ ದೇವಿಯ ಕಾರ್ಣಿಕಕ್ಕೆ ಶರಣಾಗಿ ತಮ್ಮ ವೃತ್ತಿಗೆ ರಾಜೀನಾಮೆ ಕೊಟ್ಟು ದೇವಿಯ ಸೇವೆಯಲ್ಲೇ ತೊಡಗಿಸಿಕೊಂಡಿದ್ದರು.
ದೇವಸ್ಥಾನದಲ್ಲಿ ಸದ್ಯಕ್ಕೆ ಹೊಸ ನಿರ್ಮಾಣ ಕಾರ್ಯಗಳೂ ನಡೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಹಣ ಮತ್ತು ಗೌರವ ಗಳಿಸಲು ಬಯಸುತ್ತಾರೆ. ಆದ್ರೆ ಇದು ಕೆಲವರಿಗೆ ಕನಸು ನಾನಸಾಗುತ್ತದೆ. ಇನ್ನು ಕೆಲವರಿಗೆ ಕನಸು ಹಾಗೆ ಉಳಿದುಬಿಡುತ್ತದೆ. ...
ವೀರಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಇಂದು ಸಿದ್ದರಾಮಯ್ಯ ಸರ್ಕಾರ 50 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದೆ. ನ.22 ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಡೆದ ಭಯೋತ್ಪಾದರ ವಿರುದ್ಧದ ಕಾರ್ಯಾಚರಣೆ...
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮುಚ್ಚಳಿಕೆ ಬರೆಸಿ ಪ್ರಕರಣ ದಾಖಲಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ತನಿಖೆಗೆ ಆದೇಶಿಸಲಾಗಿದೆ. ಸ್ಪೀಕರ್ ಯು ಟಿ ಖಾದರ್ ಅವರು...
ಚಳಿಗಾಲದಲ್ಲಿ ಹೆಚ್ಚಾಗಿ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಚರ್ಮವು ಡ್ರೈ ಆಗುವುದರ ಜೊತೆಗೆ ಮುಖದ ಮೇಲೆ ಸೋಂಕುಗಳು ಹೆಚ್ಚು ಕಂಡುಬರುತ್ತದೆ. ಆದಾಗ್ಯೂ, ಮನೆಯಲ್ಲಿ ಸುಲಭ...