BREAKING: ತಿರುಪತಿ ತಿಮ್ಮಪ್ಪನಿಗೆ ಪ್ರಧಾನಿ ಮೋದಿ ಸರ್ಕಾರದ ಆಘಾತ

ಹಿಂದೂಗಳ ಪ್ರಸಿದ್ಧ ಕ್ಷೇತ್ರ ತಿರುಪತಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೊಡ್ಡ ಆಘಾತವೊಂದನ್ನು ನೀಡಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಹುಂಡಿಗಳಲ್ಲಿ ವಿದೇಶಿ ಕರೆನ್ಸಿ ರೂಪದಲ್ಲಿ ಹಾಕಿರುವ ಕಾಣಿಕೆಯನ್ನು ಬ್ಯಾಂಕ್​ ಖಾತೆಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.

ಮೋದಿ ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆ ಉಳಿದಿದೆ ಎಂದು ಇಂಗ್ಲೀಷ್​ ದೈನಿಕ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಮೂರು ವರ್ಷಗಳಿಂದ ಮೋದಿ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ನಿಯಮ (FCRA) ಅಡಿಯಲ್ಲಿ  ತಿರುಪತಿ ತಿಮ್ಮಪ್ಪ ದೇವಸ್ಥಾನಂ ಟ್ರಸ್ಟ್​​ (TTD)ಗೆ ನೀಡಲಾಗಿದ್ದ ಪರವಾನಿಗೆಯನ್ನು ಅಮಾನತಿನಲ್ಲಿಟ್ಟಿದೆ.

ಹೀಗಾಗಿ ಭಕ್ತರು ಹುಂಡಿಗೆ ಹಾಕುವ ವಿದೇಶಿ ಕರೆನ್ಸಿಯನ್ನೂ ಬ್ಯಾಂಕ್​ಗೆ ಜಮೆ ಮಾಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ನಿರ್ಬಂಧ ಉಲ್ಲೇಖಿಸಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಈ ಕಾಣಿಕೆಯನ್ನು ಜಮೆ ಮಾಡಿಕೊಳ್ಳಲು ನಿರಾಕರಿಸುತ್ತಿದೆ.

ಕಳೆದ ವರ್ಷದ ವರದಿ ಪ್ರಕಾರ ಹುಂಡಿಗಳ ಮೂಲಕವೇ ಟಿಟಿಡಿ 1,450 ಕೋಟಿ ರೂಪಾಯಿ ಕಾಣಿಕೆ ಬಂದಿತ್ತು.

ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ ಹುಂಡಿ ಕಾಣಿಕೆ:

ಅಮೆರಿಕನ್​ ಡಾಲರ್​ – 11.50 ಕೋಟಿ ರೂ.

ಮಲೇಷ್ಯಾ ರಿಗಿಂಟ್​ – 5.93 ಕೋಟಿ ರೂ.

ಯುಎಇ ದಿರಮ್​ – 1.75 ಕೊಟಿ ರೂ.

ಸಿಂಗಾಪುರ ಡಾಲರ್​: 4.06 ಕೋಟಿ ರೂ.

ಇಂಗ್ಲೆಂಡ್​ ಪೌಂಡ್​ – 97 ಲಕ್ಷ ರೂ.

ಯುರೋಪಿಯನ್​ ಯೂನಿಯನ್​ ಯುರೋ: 97 ಲಕ್ಷ

ಆಸ್ಟ್ರೇಲಿಯಾ ಡಾಲರ್​ – 74 ಲಕ್ಷ ರೂ.

ಕೆನಡಾ ಡಾಲರ್​: 40 ಲಕ್ಷ ರೂ.

ಇತರೆ ವಿದೇಶಿ ಕರೆನ್ಸಿ: 80 ಲಕ್ಷ ರೂ.

ಜೊತೆಗೆ ತಪ್ಪಾದ ರೂಪದಲ್ಲಿ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯದ ಎಫ್​ಸಿಆರ್​ಎ ವಿಭಾಗ ಟಿಟಿಡಿಗೆ 3.19 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಜೊತೆಗೆ 2019ರಲ್ಲಿ ಎಫ್​ಸಿಆರ್​ಎ ಪರವಾನಿಗೆ ನವೀಕರಣ ಮಾಡದೇ ಇರುವುದನ್ನು ಮುಚ್ಚಿಟ್ಟ ಆರೋಪದಡಿ 1.14 ಕೋಟಿ ರೂಪಾಯಿ ದಂಡ ವಿಧಿಸಿತ್ತು.