ಹೊಸ ಭಾರತದ ಶಿಲ್ಪಿ ಎಂದೇ ಕರೆಯಲ್ಪಡುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭಾರತ ಸರ್ಕಾರದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು 1971ರ ಬಳಿಕ. 1971-72ರ ಅವಧಿಯಲ್ಲಿ ವಿದೇಶ ವ್ಯಾಪಾರ ಸಚಿವಾಲಯದಲ್ಲಿ ಭಾರತ ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು ಮನಮೋಹನ್ ಸಿಂಗ್. ಇದರೊಂದಿಗೆ ಮನಮೋಹನ್ ಅವರ ದಿಕ್ಕು ದೆಸೆಯೇ ಬದಲಾಯಿತು.
1972-76ರಲ್ಲಿ ಹಣಕಾಸು ಸಚಿವಾಲಯಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು ಮನಮೋಹನ್ ಸಿಂಗ್. ಇದಾದ ಬಳಿಕ ನವೆಂಬರ್ 1976ರಿಂದ 1980ರವರೆಗೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿ, ಬಾಹ್ಯಾಕಾಶ ಆಯೋಗದ ಸದಸ್ಯರಾಗಿ, ಅಣುಶಕ್ತಿ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 1980-1982ರವರೆಗೆ ಯೋಜನಾ ಆಯೋಗದ ಸದಸ್ಯ ಕಾರ್ಯದರ್ಶಿಯೂ ಆಗಿದ್ದರು.
1982ರ ಸೆಪ್ಟೆಂಬರ್ನಿಂದ ಜುಲೈ 1985ರವರೆಗೆ ಭಾರತದ ಅತ್ಯುನ್ನತ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು. 1985ರಿಂದ 1987ರ ಜುಲೈವರೆಗೆ ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
19990ರಿಂದ 1991 ಮಾರ್ಚ್ವರೆಗೆ ಪ್ರಧಾನಮಂತ್ರಿ ಪಿ ವಿ ನರಸಿಂಹರಾವ್ ಅವರಿಗೆ ಮುಖ್ಯ ಅರ್ಥಿಕ ಸಲಹೆಗಾರರಾಗಿದ್ದರು. ಮಾರ್ಚ್ 1991ರಿಂದ ಜೂನ್ 1991ರವರೆಗೆ ಯುಜಿಸಿ ಮುಖ್ಯಸ್ಥರಾಗಿದ್ದರು.
ಸೆಪ್ಟೆಂಬರ್ 1991ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. 1995ರಲ್ಲಿ ಎರಡನೇ ಬಾರಿಗೆ ರಾಜ್ಯಸಭೆಗೆ ಸಂಸದರಾಗಿ ಆಯ್ಕೆಯಾದರು. ಜೂನ್ 21,1991ರಿಂದ ಮೇ 15, 1996ರವರೆಗೆ ಪ್ರಧಾನಿಯಾಗಿದ್ದ ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.
1998ರಿಂದ ಮೇ 22ರವರೆಗೆ ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಆ ಬಳಿಕ ಮೇ 22,2004ರಿಂದ 2014ರ ಮೇವರೆಗೆ ಯುಪಿಎ ಸರ್ಕಾರದಲ್ಲಿ ಸತತ 10 ವರ್ಷಗಳ ಕಾಲ ದೇಶದ ಪ್ರಧಾನಿ ಆಗಿ ದೇಶವನ್ನು ಮುನ್ನಡೆಸಿದ್ದು ಐತಿಹಾಸಿಕ ಕಾಲಘಟ್ಟ.
ADVERTISEMENT
ADVERTISEMENT