Fake News: ಸುಳ್ಳು, ಪ್ರಚೋದನಕಾರಿ ಸುದ್ದಿ – ಸುದರ್ಶನ ನ್ಯೂಸ್​ ಚಾನೆಲ್​ನ ಸ್ಥಾನೀಯ ಸಂಪಾದಕನ ಬಂಧನ

ಟ್ವಿಟ್ಟರ್​ನಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಪೋಸ್ಟ್​ ಹಾಕಿದ್ದ ಸುದರ್ಶನ ನ್ಯೂಸ್​ ಚಾನೆಲ್​ನ ಸ್ಥಾನೀಯ ಸಂಪಾದಕ ಮುಖೇಶ್​ ಕುಮಾರ್​ ಅವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಗುರುಗ್ರಾಮ ನಗರದ ಗುರುಗ್ರಾಮ ಸೈಬರ್​ ಸ್ಟೇಷನ್​ ಪೂರ್ವ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದಲ್ಲಿ ಸಿಎಂ ಮನೋಹರ್​ ಲಾಲ್​ ಕಟ್ಟರ್​ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಸುದರ್ಶನ ಟಿವಿ ಚಾನೆಲ್​ ಬಲಪಂಥೀಯ ಚಾನೆಲ್​ ಆಗಿದೆ.

ನೂಹ್​ ಹಿಂಸಾಚಾರದ ಬಳಿಕ ಚಾನೆಲ್​ ಸ್ಥಾನಿಯ ಸಂಪಾದಕರಾಗಿರುವ ಮುಖೇಶ್​ ಕುಮಾರ್​ ಪ್ರಚೋದನಕಾರಿ ಟ್ವೀಟ್​ ಮಾಡಿದ್ದರು.

ಕತಾರ್​ ನ್ಯೂಸ್​ ಏಜೆನ್ಸಿ ಅಲ್​ ಜಝೀರಾ ಹಿಂದೂಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗುರುಗ್ರಾಮ ಪೊಲೀಸ್​ ಆಯುಕ್ತರ ಮೇಲೆ ಒತ್ತಡ ಹಾಕುತ್ತಿದೆ

ಎಂದು ಆಗಸ್ಟ್ 8ರಂದು ಪ್ರಚೋದನಕಾರಿ ಟ್ವೀಟ್​ ಮಾಡಿದ್ದರು.

ಆದರೆ ಸುದರ್ಶನ್​ ಟಿವಿ ಚಾನೆಲ್​ ಸ್ಥಾನಿಯ ಸಂಪಾದಕ ಮುಖೇಶ್​ ಕುಮಾರ್​ ಅವರನ್ನು ಅಪಹರಣ ಮಾಡಲಾಗಿದೆ ಎಂದು ವಾದಿಸಿತ್ತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾರಿನಿಂದ ಎಳೆದು ಅಪಹರಣ ಮಾಡಲಾಗಿದೆ ಎಂದು ಟ್ವೀಟಿಸಿತ್ತು. 

LEAVE A REPLY

Please enter your comment!
Please enter your name here