ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣವಚನಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಾಕ್ಷಿಯಾಗಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅನ್ಯ ರಾಜ್ಯಗಳ ನಾಯಕರಿಗೂ ಆಹ್ವಾನ ನೀಡಿದೆ.
ಸಿದ್ದರಾಮಯ್ಯ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಆಗಲಿರುವ ಅನ್ಯ ರಾಜ್ಯಗಳ ನಾಯಕರು:
ಎಂ ಕೆ ಸ್ಟಾಲಿನ್ – ತಮಿಳುನಾಡು ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ನಿತೀಶ್ ಕುಮಾರ್ – ಬಿಹಾರ ಮುಖ್ಯಮಂತ್ರಿ
ಕೆ ಸಿ ಚಂದ್ರಶೇಖರ್ ರಾವ್ – ತೆಲಂಗಾಣ ಮುಖ್ಯಮಂತ್ರಿ
ಉದ್ಧವ್ ಠಾಕ್ರೆ – ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ
ಅಖಿಲೇಶ್ ಸಿಂಗ್ ಯಾದವ್ – ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ
ತೇಜಸ್ವಿ ಯಾದವ್ – ಬಿಹಾರ ಉಪ ಮುಖ್ಯಮಂತ್ರಿ
ಹೇಮಂತ್ ಸೊರೇನ್ – ಜಾರ್ಖಂಡ್ ಮುಖ್ಯಮಂತ್ರಿ
ಫಾರೂಕ್ ಅಬ್ದುಲ್ಲಾ – ಎನ್ಸಿಪಿ ಮುಖ್ಯಸ್ಥ
ನವೀನ್ ಪಟ್ನಾಯಕ್ – ಒಡಿಶಾ ಮುಖ್ಯಮಂತ್ರಿ
ಶರದ್ ಪವಾರ್ – ಎನ್ಸಿಪಿ ಮುಖ್ಯಸ್ಥ
ಭೂಪೇಂದ್ರ ಸಿಂಗ್ ಬಘೇಲ್ – ಛತ್ತೀಸ್ಗಢ ಮುಖ್ಯಮಂತ್ರಿ
ಅಶೋಕ್ ಗೆಹ್ಲೋಟ್ – ರಾಜಸ್ಥಾನ ಮುಖ್ಯಮಂತ್ರಿ
ಸುಖ್ವಿಂದರ್ ಸಿಂಗ್ ಸುಕು – ಹಿಮಾಚಲ ಪ್ರದೇಶ ಮುಖ್ಯಮಂತ್ರಿ
ADVERTISEMENT
ADVERTISEMENT