ಹಾಸನ: ನಡುಬೀದಿಯಲ್ಲಿ ರೌಡಿ ಶೀಟರ್​ ಬರ್ಬರ ಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರೌಡಿ ಶೀಟರ್​ನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಪಟ್ಟಣದ ಥಿಯೇಟರ್​ ಬಳಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗ್​ ಬೀಸಿ ರೌಡಿ ಶೀಟರ್​ ಮಾಸ್ತಿ ಗೌಡ ಎಂಬಾತನನ್ನು ಕೊಲೆ ಮಾಡಿದ್ದಾರೆ.

ರೌಡಿ ಶೀಟರ್​ ಮಾಸ್ತಿಗೌಡ ಸ್ಥಳದಲ್ಲಿ ಬಲಿಯಾಗಿದ್ದಾನೆ. ಈತ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯವನು.

ಮಾಹಿತಿಗಳ ಪ್ರಕಾರ ಈತನಿಗೂ ಮತ್ತೋರ್ವ ರೌಡಿ ಶೀಟರ್​ ಚೇತುಗೌಡ ಎಂಬಾತನಿಗೆ ದ್ವೇಷ ಇತ್ತು. ಚೇತು ಗೌಡನ ಕೊಲೆಗೂ ಮಾಸ್ತಿ ಗೌಡ ಪಿತೂರಿ ನಡೆಸಿದ್ದ. ಹೀಗಾಗಿ ಆ ದ್ವೇಷದಲ್ಲೇ ಚೇತುಗೌಡ ಗ್ಯಾಂಗ್​ ಈ ಕೊಲೆ ಮಾಡಿರುವ ಶಂಕೆ ಪೊಲೀಸರದ್ದು.

LEAVE A REPLY

Please enter your comment!
Please enter your name here