ಕಾರ್ಕಳ: ರೆಂಜಾಳ ಕಾಂಗ್ರೆಸ್​ ಕಾರ್ಯಕರ್ತರಿಂದ ನೆರವು

ಕಾರ್ಕಳ ತಾಲೂಕಿನ ರೆಂಜಾಳ ಕಾಂಗ್ರೆಸ್​​ ಕಾರ್ಯಕರ್ತರು ತಮ್ಮ ನೆರವಿನ ಹಸ್ತ ಚಾಚಿದ್ದಾರೆ.

ವಿಕಲಚೇತನರಾಗಿರುವ ಅನಿತಾ ದೇವಾಡಿಗ ಅವರ ಔಷಧೀಯ ಖರ್ಚಿಗೆ ಧನ ಸಹಾಯ ಮಾಡಿದ್ದಾರೆ.

ರಾಜ್ಯ ಮಟ್ಟದ ಕುಸ್ತಿಪಟ್ಟುವಲ್ಲಿ ವಿಜೇತವಾದ ಕುಮಾರಿ ದೀಪ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಹಣಕಾಸು ನೆರವು ನೀಡಿದ್ದಾರೆ.

ಅಚ್ಚು ಆಚಾರಿ ಇವರಿಗೆ ವರ್ಷದ ಔಷಧಿಯ ಖರ್ಚಿಗೆ ಧನ ಸಹಾಯವನ್ನು ಮಾಡಿದ್ದಾರೆ.

ಈ ವೇಳೆ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ಹಾಗೂ ರೆಂಜಾಳ ಕಾಂಗ್ರೆಸ್ಸಿನ ಮುಖಂಡರುಗಳಾದ ಅಭಿನಂದನ್ ಜೈನ್, ನವೀನ್ ಶೇರುವ, ರಾಜೇಶ್ ದೇವಾಡಿಗ ಮತ್ತು ಕಾಂಗ್ರೆಸ್​ ಕಾರ್ಯಕರ್ತರಿದ್ದರು.

LEAVE A REPLY

Please enter your comment!
Please enter your name here