Mangaluru: ವಕೀಲರ ವಿರುದ್ಧದ ಅತ್ಯಾಚಾರ ಕೇಸ್​ ರದ್ದತಿಗೆ ಹೈಕೋರ್ಟ್​ ನಕಾರ

ಮಂಗಳೂರು ಮೂಲದ ವಕೀಲರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್​ ನಿರಾಕರಿಸಿದೆ.

ವಕೀಲ ರಾಜೇಶ್​ ಕೆ  ಎಸ್​ ಎನ್​ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. 

ಆರೋಪಿಯೂ ಪೂರ್ಣ ಪ್ರಮಾಣದ ವಿಚಾರಣೆಯನ್ನು ಎದುರಿಸಿ ಮುಕ್ತನಾಗಿ ಹೊರಬರಬೇಕು ಎಂದು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದೆ.

ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಎರಡನೇ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದ ಯುವತಿ ವಕೀಲ ರಾಜೇಶ್​ ಕೆ ಎನ್​ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. 2021ರ ಆಗಸ್ಟ್​ನಲ್ಲಿ ಆಕೆ ಈ ವಕೀಲದ ಕಚೇರಿಯಲ್ಲಿ ಇಂಟರ್ನ್​​ ಆಗಿ ಕೆಲಸಕ್ಕೆ ಸೇರಿದ್ದಳು.

LEAVE A REPLY

Please enter your comment!
Please enter your name here