Police: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಪೊಲೀಸ್​ ಇನ್ಸ್​​ಪೆಕ್ಟರ್​​ಗಳ ವರ್ಗಾವಣೆ

Police Recruitment Exam
Representative Image

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರ ವೃತ್ತದ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಜಯರಾಮ್​ದೇವ್​ ಗೌಡ ಅವರನ್ನು ವರ್ಗಾಯಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಅಜ್ಮತ್​ ಅಲಿ ಅವರನ್ನು ವರ್ಗಾಯಿಸಲಾಗಿದೆ.

ಮಂಗಳೂರು ಪೂರ್ವ ಪೊಲೀಸ್​ ಠಾಣೆ (ಕದ್ರಿ) ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಪಣಂಬೂರು ಠಾಣೆ ಪಿಐ ಆಗಿದ್ದ ಸೋಮಶೇಖರ್​ ಜೆ ಸಿ ಅವರನ್ನು ವರ್ಗಾಯಿಸಲಾಗಿದೆ.

ಕದ್ರಿ ಠಾಣೆ ಪಿಐ ಆಗಿದ್ದ ಅನಂತಪದ್ಮನಾಭ ಕೆ ವಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಮಂಗಳೂರು ಉತ್ತರ ಸಂಚಾರ ಪೊಲೀಸ್​ ಠಾಣೆ ಪಿಐ ಆಗಿದ್ದ ಸುರೇಶ್​ ಕುಮಾರ್​, ಕದ್ರಿ ಠಾಣೆ ಪಿಐ ಆಗಿದ್ದ ರಾಘವೇಂದ್ರ ಎಂ ಬೈಂದೂರು ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಮಂಗಳೂರು ನಗರ ಸಿ ಟಿ ಎಸ್​ಬಿಯಲ್ಲಿ ಪಿಐ ಆಗಿದ್ದ ಮಹಮ್ಮದ್​ ಷರೀಫ್​ ಅವರನ್ನು ಮಂಗಳೂರು ಉತ್ತರ ಸಂಚಾರ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ.

ಆಂತರಿಕ ಗುಪ್ತಚರ ದಳದಲ್ಲಿದ್ದ ಸಂದೇಶ್​ ಪಿ ಜಿ ಅವರನ್ನು ಮೂಡಬಿದ್ರೆ ಪೊಲೀಸ್​ ಠಾಣೆ ಪಿಐ ಆಗಿ ವರ್ಗಾಯಿಸಲಾಗಿದೆ.

ಉಡುಪಿ ಜಿಲ್ಲೆಯ ಕಾಪು ವೃತ್ತದ ಪಿಐ ಆಗಿದ್ದ ಪೂವಯ್ಯ ಕೆ ಸಿ ಅವರನ್ನು ಮೈಸೂರು ನಗರ ಸಿಸಿಬಿ-2 ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ವರ್ಗಾಯಿಸಲಾಗಿದೆ.

ಬಜ್ಪೆ ಪೊಲೀಸ್​ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿದ್ದ ನಿರಂಜನ್​ ಕುಮಾರ್​ ಅವರನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here