ADVERTISEMENT
ADVERTISEMENT
ಇವತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ದರ್ಶನ್ ಹುಟ್ಟುಹಬ್ಬದಂದೇ ಅವರಿಗೆ ಬಿಗ್ಬಾಸ್ ಖ್ಯಾತಿ ಒಳ್ಳೆ ಹುಡುಗ ಪ್ರಥಮ್ ಎರಡು ಬುದ್ಧಿಮಾತು ಹೇಳಿದ್ದಾರೆ.
ದರ್ಶನ್ ಅವರಿಗೆ ಹೇಳಿರುವ ಆ 2 ಬುದ್ಧಿಮಾತನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ದರ್ಶನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
HBD @dasadarshan sir! 2ಮಾತು ಹೇಳ್ತೀನಿ!ದಯವಿಟ್ಟು ಸ್ವೀಕರಿಸಿ!ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡmassಹೀರೋ ನೀವು!
ಭಗವಂತ ಎಲ್ಲಾ ಕೊಟ್ಟಿದ್ದಾನೆ ನಿಮ್ಗೆ,ಎಷ್ಟುfans ಇದಾರೆ ನೋಡಿ?ಇಷ್ಟಿದ್ಮೇಲೆ ಕೂಲಾಗಿರಿ!ಆರಾಮಾಗಿರಿ!
2- ನಿಮ್ಮ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ!ನೀವು-mediaಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ🙏
ಎಂದು ದರ್ಶನ್ ಅವರಿಗೆ ಪ್ರಥಮ್ ಬುದ್ಧಿಮಾತು ಹೇಳಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಯೊಬ್ಬರು ಕಮೆಂಟ್ ಹಾಕಿದ್ದಾರೆ.
ಪ್ರತಮ್ ಅಣ್ಣಾ, ದರ್ಶನ್ ಆದ ಮೇಲೆ , ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಮಾಸ್ ಹೀರೊ ಅಂದ್ರೆ ನೀವೇ.
ದರ್ಶನ್ ಗೆ ಎಸ್ಟ್ ಫ್ಯಾನ್ಸ್ ಇದ್ದಾರೋ ಅಷ್ಟು ನಿಮ್ಗೆ ಮುಂದೆ ಆಗ್ತಾರೆ , ಆದ್ರೆ ಬಿಗ್ ಬಾಸ್ ನಲ್ಲಿ ನಿಮ್ಮನ್ನು Pre-Plan ಆಗಿ ಹೊಡೆಸಿದ ಕಲರ್ಸ್ TVಯ ರಾಘವೇಂದ್ರ ಹುಣಸೂರು ಅವ್ರನ್ನ ಮಾತ್ರ ಸುಮ್ಮನೆ ಬಿಡಬೇಡಿ.
ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಅದಕ್ಕೆ ಪ್ರಥಮ್ ಅವರು ಕೊಟ್ಟ ಉತ್ತರ ಹೇಗಿತ್ತು ಎಂದರೆ:
ಅಪ್ಪ ಸ್ವಾಮಿ.ನಿಮ್ಮ ಕೈಮುಗೀತಿನಿ ಬೆಂಕಿ ಕಚ್ಚಬೇಡ್ರೋ….ಈಗಾಗಲೇ @darshan sir ನನ್ನ ಮೇಲ್ವ್ ಸುಮ್ಮಸುಮ್ಮನೆ ಕೋಪಾಅಡ್ಕೊಂಡಿದ್ದಾರೆ.ಹಿಂಗೆಲ್ಲಾ ನೀವು tweet ಮಾಡಿದ್ರೆ ಪ್ರಥಮ್ ದೊಡ್ಡ ಹೀರೋ ನ ಅಂತ ಇನ್ನೂ ಜಾಸ್ತಿ ಕೋಪ ಮಾಡ್ಕೊಳ್ತಾರೆ.ನನ್ನ ಪಾಡಿಗೆ ನನ್ನ ಬಿಡ್ರೋ..ಯಾಕಪ್ಪ ??🤔🤗😂🙏❤