ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬುಧವಾರ ಮಂಡಿಸಿದ ಹೊಸ ಆಯವ್ಯಯದಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಆಳವಡಿಸಿಕೊಂಡರೆ 7 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಇರಲ್ಲ ಎಂದು ಘೋಷಿಸಿದೆ. ಹೊಸ ತೆರಿಗೆ ಪದ್ಧತಿಯನ್ನು ಬಜೆಟ್ನಲ್ಲಿ ಜನಸಾಮಾನ್ಯರಿಗೆ ಕೊಟ್ಟಿರುವ ಉಡುಗೊರೆ ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ.
ಅದರೆ ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡರೆ ಹಳೆ ಆದಾಯ ತೆರಿಗೆ ಪದ್ಧತಿಯಲ್ಲಿ ಸಿಗುವ 70 ಆದಾಯ ತೆರಿಗೆ ವಿನಾಯಿತಿಗಳು ಲಭ್ಯ ಆಗಲ್ಲ.
ಹೊಸ ತೆರಿಗೆ ಪದ್ಧತಿಯಲ್ಲಿ ಕೈ ತಪ್ಪಲಿರುವ ತೆರಿಗೆ ವಿನಾಯಿತಿಗಳು ಹೀಗಿವೆ. ಹಳೆ ಪದ್ಧತಿಯಲ್ಲಿ ಲಭ್ಯ ಇರುವ ಈ ಕೆಳಕಂಡ ವಿನಾಯಿತಿಗಳು ಸೇರಿದಂತೆ ಒಟ್ಟು 70 ವಿನಾಯಿತಿಗಳು ಹೊಸ ತೆರಿಗೆ ಪದ್ಧತಿಯಲ್ಲಿ ಸಿಗಲ್ಲ.
ಜೀವವಿಮೆ, ಆರೋಗ್ಯ ವಿಮೆ, ಮನೆ ಸಾಲ, ಉಳಿತಾಯ ಠೇವಣಿ ಮೇಲಿನ ಬಡ್ಡಿಯಿಂದ ಆದಾಯ, ಸಂಸ್ಥೆಗಳಿಗೆ ನೀಡಲಾಗುವ ದೇಣಿಗೆ ಒಳಗೊಂಡಂತೆ ಹಲವು ರೀತಿಯ ತೆರಿಗೆ ವಿನಾಯಿತಿಗಳು ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ರದ್ದಾಗಲಿವೆ.
1. ಆದಾಯ ತೆರಿಗೆ ಕಲಂ 80 ಸಿ: ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ಹೂಡಿಕೆ ( ಇಪಿಎಫ್), ಜೀವ ವಿಮೆ ಕಂತು ಪಾವತಿ, ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) ಹೂಡಿಕೆ, ಗೃಹ ಸಾಲ ಮರು ಪಾವತಿಯನ್ನು ಆಧಾರಿಸಿ ನೀಡಲಾಗುವ ಆದಾಯ ತೆರಿಗೆ ವಿನಾಯಿತಿ. ಹಳೆ ತೆರಿಗೆ ಪದ್ಧತಿ ಪ್ರಕಾರ ಈ ಕಲಂ ಅಡಿಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.
2. ಆದಾಯ ತೆರಿಗೆ ಕಲಂ 80ಸಿಡಿ (1ಬಿ): ಈ ಕಲಂ ಅಡಿಯಲ್ಲಿ ಎನ್ಪಿಎಸ್ ಖಾತೆಯಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ಈ ಕಲಂ ಅಡಿಯಲ್ಲಿ ಪಡೆಯಬಹುದಾದ ತೆರಿಗೆ ವಿನಾಯಿತಿಯ ಗರಿಷ್ಠ ಮೊತ್ತ 50 ಸಾವಿರ ರೂಪಾಯಿ.
3.ಆದಾಯ ತೆರಿಗೆ ಕಲಂ 80ಡಿ: ವೈದ್ಯಕೀಯ ವಿಮೆ ಪಾವತಿಗಾಗಿ ನೀಡಲಾಗುವ ತೆರಿಗೆ ವಿನಾಯಿತಿ. ವೈಯಕ್ತಿಕವಾಗಿ ಒಬ್ಬರು 25 ಸಾವಿರ ರೂಪಾಯಿಯಷ್ಟು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಹಿರಿಯ ನಾಗರಿಕರು 50 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
4. ರಜಾ ಕಾಲದ ಪ್ರವಾಸ ಭತ್ಯೆ ಮೇಲೆ ನೌಕರರು ನಾಲ್ಕು ವರ್ಷಕ್ಕೆ ಎರಡು ಬಾರಿ ಪಡೆಯಬಹುದಾದ ತೆರಿಗೆ ವಿನಾಯಿತಿ.
5. ಮನೆ ಬಾಡಿಗೆ ಭತ್ಯೆ ಆಧಾರದಲ್ಲಿ ಸಿಗುವ ಆದಾಯ ತೆರಿಗೆ ವಿನಾಯಿತಿ. ಅಂದರೆ ಮನೆ ಬಾಡಿಗೆ ಪಾವತಿ ಮೊತ್ತವನ್ನು ಉಲ್ಲೇಖಿಸಿ ಪಡೆಯಬಹುದಾದ ತೆರಿಗೆ ವಿನಾಯಿತಿ.
6. ಆದಾಯ ತೆರಿಗೆ ಕಲಂ 80ಟಿಟಿಎ – ಉಳಿತಾಯ ಖಾತೆಗಳ ಬಡ್ಡಿಯಿಂದ ಬರುವ ಆದಾಯದ ಮೇಲೆ ಸಿಗುವ ತೆರಿಗೆ ವಿನಾಯಿಯಿ
7. ಆದಾಯ ತೆರಿಗೆ ಕಲಂ 80ಟಿಟಿಬಿ – ಎಲ್ಲ ರೀತಿಯ ಠೇವಣಿಗಳ ಬಡ್ಡಿಯಿಂದ ಬರುವ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ
8. ಮನರಂಜನಾ ಭತ್ಯೆ ಆಧರಿಸಿ ಉದ್ಯೋಗಿಗಳು ಪಡೆದುಕೊಳ್ಳಬಹುದಾದ ಆದಾಯ ತೆರಿಗೆ ವಿನಾಯಿತಿ
9. ಆದಾಯ ತೆರಿಗೆ ಕಲಂ 24: ಮನೆ ಸಾಲದ ಬಡ್ಡಿ ಪಾವತಿ ಮೇಲೆ ಪಡೆಯಬಹುದಾದ ತೆರಿಗೆ ವಿನಾಯಿತಿ. ಒಂದು ವೇಳೆ ಮನೆ ಸ್ವ ಅನುಭೋಗದಲ್ಲಿದ್ದರೆ ಅಥವಾ ಖಾಲಿಯಾಗಿದ್ದರೆ ಆ ಮನೆಯ ಮೇಲಿನ ಸಾಲದ ಬಡ್ಡಿ ಪಾವತಿ ಮೇಲೆ ಸಿಗುವ ತೆರಿಗೆ ವಿನಾಯಿತಿ.
10. ಆದಾಯ ತೆರಿಗೆ ಕಲಂ 80 ಡಿ ಮತ್ತು 80ಡಿಡಿಬಿ: ಒಂದು ವೇಳೆ ಸ್ವತಃ ವಿಕಲಚೇತನರಾಗಿದ್ದರೆ ಅಥವಾ ಅವಲಂಬಿತರು ವಿಕಲಚೇತನರಾಗಿದ್ದರೆ ಅವರ ವೈದ್ಯಕೀಯ ಖರ್ಚಿನ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
11. ಆದಾಯ ತೆರಿಗೆ ಕಲಂ 80ಇ: ಶೈಕ್ಷಣಿಕ ಸಾಲದ ಬಡ್ಡಿ ಪಾವತಿ ಮೇಲೆ ಸಿಗುವ ತೆರಿಗೆ ವಿನಾಯಿತಿ.
12 ಆದಾಯ ತೆರಿಗೆ ಕಲಂ 80ಜಿ: ದಾನ, ದೇಣಿಗೆ ಕೊಟ್ಟರೆ ಪಡೆಯಬಹುದಾದ ಆದಾಯ ತೆರಿಗೆ ವಿನಾಯಿತಿ.
13. ಆದಾಯ ತೆರಿಗೆ ಕಲಂ 80ಸಿಸಿಸಿ: ಪಿಂಚಣಿ ಯೋಜನೆಗೆ ಪಾವತಿ ಮಾಡಲಾಗುವ ಕಂತಿನ ಮೇಲೆ ಸಿಗುವ ತೆರಿಗೆ ವಿನಾಯಿತಿ
14. ಆದಾಯ ತೆರಿಗೆ ಕಲಂ 80ಇಇ: ವಸತಿ ಅಡಮಾನ ಸಾಲದ ಮೇಲಿನ ಬಡ್ಡಿ ಪಾವತಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ.
15. ಆದಾಯ ತೆರಿಗೆ ಕಲಂ 80ಇಇಎ: ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ. ಇದರಡಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ.
16. ಆದಾಯ ತೆರಿಗೆ ಕಲಂ 80ಇಇಬಿ: ಎಲೆಕ್ಟ್ರಿಕ್ ವಾಹನ ಖರೀದಿ ಸಾಲದ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
17. ಆದಾಯ ತೆರಿಗೆ ಕಲಂ 80ಜಿಜಿ: ಬಾಡಿಗೆ ಪಡೆದಿರುವ ಆಸ್ತಿ ಮೇಲೆ ಪಾವತಿಸಲಾಗುವ ಬಾಡಿಗೆ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
18. ಆದಾಯ ತೆರಿಗೆ ಕಲಂ 80ಜಿಜಿಎ: ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಅರಣ್ಯೀಕರಣಕ್ಕಾಗಿ ನೀಡಲಾಗುವ ದೇಣಿಗೆ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
19. ಆದಾಯ ತೆರಿಗೆ ಕಲಂ 80ಜಿಜಿಸಿ: ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆ ಮೇಲೆ ಸಿಗುವ ತೆರಿಗೆ ವಿನಾಯಿತಿ.
20. ಆದಾಯ ತೆರಿಗೆ ಕಲಂ 80ಐಎ: ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಲಾಭದ ಮೇಲೆ ಪಡೆಬಹುದಾದ ತೆರಿಗೆ ವಿನಾಯಿತಿ.
ಹಿಂದೂಗಳ ಪ್ರಸಿದ್ಧ ಕ್ಷೇತ್ರ ತಿರುಪತಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೊಡ್ಡ ಆಘಾತವೊಂದನ್ನು ನೀಡಿದೆ.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಹುಂಡಿಗಳಲ್ಲಿ ವಿದೇಶಿ ಕರೆನ್ಸಿ ರೂಪದಲ್ಲಿ ಹಾಕಿರುವ ಕಾಣಿಕೆಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದಂತೆ ನಿರ್ಬಂಧ...
ಜೀಪ್ಗೆ ಡಿಕ್ಕಿ ಹೊಡೆದು ಮಾರುತಿ ಓಮಿನಿ ಕಾರಿನಲ್ಲಿ ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಭಾವಚಿತ್ರ ಇರುವ ಕ್ಯಾಲೆಂಡರ್, ಮದ್ಯದ ಪ್ಯಾಕೆಟ್ಗಳು ಮತ್ತು ಲಾಂಗ್...
ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಹೊರಡಿಸಿರುವ ಆದೇಶದ ವಿರುದ್ಧ ಇವತ್ತು ಕಾಂಗ್ರೆಸ್ ರಾಷ್ಟ್ರವ್ಯಾಪಿ ಸತ್ಯಾಗ್ರಹ ನಡೆಸುತ್ತಿದೆ.
ನವದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿ ರಾಜ್ಘಾಟ್ನಲ್ಲಿ ಸಂಕಲ್ಪ ಸತ್ಯಾಗ್ರಹಕ್ಕೆ...
ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 2 ವಿಧಾನಸಭಾ ಕ್ಷೇತ್ರಗಳಿಗಷ್ಟೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಜಮಖಂಡಿ: ಆನಂದ್ ಸಿದ್ದು ನ್ಯಾಮಗೌಡ
ಹುನಗುಂದ: ವಿಜಯಾನಂದ್ ಎಸ್ ಕಾಶಪ್ಪನವರ್
ಉಳಿದಂತೆ ಮುಧೋಳ, ತೇರದಾಳ, ಬೀಳಗಿ,...
ಎರಡನೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 8 ವಿಧಾನಸಭಾ ಕ್ಷೇತ್ರಗಳಿಗಷ್ಟೇ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ
ಕಾಗವಾಡ: ರಾಜೂಕಾಗೆ
ಕುಡಚಿ: ಮಹೇಂದ್ರ ಕೆ ತಮ್ಮಣ್ಣನವರ್
ಯಮಕನಮರಡಿ:...
ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೊದಲ ಹಂತದಲ್ಲಿ 100 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ.
ಮೊದಲ ಹಂತದಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಹಂಚಿಕೆಯಲ್ಲಿ ಅಧಿಕ ಪಾಲು ನೀಡಲಾಗಿದೆ.
ಘೋಷಣೆ ಆಗಿರುವ...
ಅವಿಭಜಿತ ಬಳ್ಳಾರಿಯ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಿದೆ.
ಹಡಗಲಿ: ಪಿ ಟಿ ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ: ಭೀಮಾನಾಯ್ಕ್
ವಿಜಯನಗರ: ಹೆಚ್ ಆರ್ ಗವಿಯಪ್ಪ
ಕಂಪ್ಲಿ: ಜೆ ಎನ್...
ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಹಂತದಲ್ಲಿ ಟಿಕೆಟ್ ಘೋಷಿಸಿದೆ.
ಹಾನಗಲ್: ಶ್ರೀನಿವಾಸ್ ಮಾನೆ, ಹಾಲಿ ಶಾಸಕರು
ಹಾವೇರಿ : ರುದ್ರಪ್ಪ ಲಮಾಣಿ
ಬ್ಯಾಡಗಿ: ಬಸವರಾಜ ಎನ್ ಶಿವಣ್ಣನವರ್
ಹಿರೇಕೆರೂರು:...
ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಮಾತ್ರ ಕಾಂಗ್ರೆಸ್ ಮೊದಲ ಹಂತದಲ್ಲಿ ಟಿಕೆಟ್ ಘೋಷಿಸಿದೆ.
ಹೊಳೆನರಸೀಪುರ ಕ್ಷೇತ್ರದಿಂದ ಶ್ರೇಯಸ್ ಎಂ ಪಟೇಲ್ ಅವರಿಗೆ ಟಿಕೆಟ್ ನೀಡಲಾಗಿದೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಮುರಳಿ...