ಮಾಜಿ ವಿಧಾನಪರಿಷತ್ ಸದಸ್ಯೆ ಮೋಟಮ್ಮ (Motamma) ಮತ್ತು ಅವರ ಮಗಳು ಕೆಪಿಸಿಸಿ (KPCC) ಪ್ರಧಾನ ಕಾರ್ಯದರ್ಶಿ ನಯನ ಮೋಟಮ್ಮ (Nayana Motamma) ಅವರು ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಮೋಟಮ್ಮ ಅವರ ಮನೆಗೆ ಅವಧೂತ ಗುರೂಜಿ (Vinay Guruji) ಎಂದೇ ಕರೆಸಿಕೊಳ್ಳುವ ವಿನಯ ಗುರೂಜಿ ಅವರು ಭೇಟಿ ನೀಡಿದ್ದರು. ಈ ವೇಳೆ ವಿನಯ ಗುರೂಜಿ ಪಾದದ ಬಳಿಕ ಕುಳಿತ ನಯನ ಮೋಟಮ್ಮ ವಿನಯ ಗುರೂಜಿ ಅವರ ಪಾದ ತೊಳೆದು ಹೂ ಸುರಿಸಿ ಅಗರಬತ್ತಿಯಿಂದ ಪಾದಪೂಜೆ ಮಾಡಿದರು.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಅವಧೂತರಾದ ಶ್ರೀ ಶ್ರೀ ವಿನಯ ಗುರೂಜಿಯವರು ಇಂದು ನಮ್ಮ ಮನೆಗೆ ಭೇಟಿ ನೀಡಿದ್ರು. ಆ ವೇಳೆ ಗುರೂಜಿಯವರ ದಿವ್ಯ ಆಶೀರ್ವಾದ ಪಡೆದು ಧನ್ಯಳಾದೆ
ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.
ಇವರ ಪೋಸ್ಟ್ಗೆ ಟೀಕೆಗಳು ಕೇಳಿಬಂದಿವೆ.
@NayanaJhawar ಸ್ವಲ್ಪ ಆದ್ರೂ ಸ್ವಾಭಿಮಾನ ಬೆಳೆಸಿಕೊಳ್ಳಿ..ಈ ಗುಲಾಮಗಿರಿಗೆ ತಲುಪಲಿ ಅಂತಾನ ಬಾಬಾ ಸಾಹೇಬರು ತಮ್ಮ ವೈಯಕ್ತಿಕ ಜೀವನವನ್ನೇ ನಮಗಾಗಿ ಅರ್ಪಿಸಿದ್ದು??
ನಿಮ್ಮಂತವರಿಂದಲೇ ದೇಶಕ್ಕೆ ಹಾಗೂ ಅಂಬೇಡ್ಕರ್ ಚಿಂತನೆಗಳಿಗೆ ಕಳಂಕ.
ಇದೇಲ್ಲಾ ಮಾಡೋದ್ರು ಬದ್ಲು ಎಲ್ಲಾದ್ರು ಹೋಗಿ ಸಾಯ್ರಿ…ಥೂ ಅಸಹ್ಯ🤑😤— ಸುನೀಲ್ ಹುಣಸೂರು (@sunilhc07) September 15, 2022
ನಯನ ಅವರ ಮೇಲೆ ಒಂದು ಅಭಿಮಾನ ಇತ್ತು ಆದ್ರೆ ಅದು ವ್ಯರ್ಥ ಆಯಿತು. ನಿಮ್ಮ ಅವಡುತ ಕಳ್ಳ ಗುರು https://t.co/HDz0oE5hiQ pic.twitter.com/QxXYCMHF7O
— ದೈವಿಕ್ 🎯🇮🇳® (@Daivik12345) September 15, 2022
@NayanaJhawar ಸ್ವಲ್ಪ ಆದ್ರೂ ಸ್ವಾಭಿಮಾನ ಬೆಳೆಸಿಕೊಳ್ಳಿ..ಈ ಗುಲಾಮಗಿರಿಗೆ ತಲುಪಲಿ ಅಂತಾನ ಬಾಬಾ ಸಾಹೇಬರು ತಮ್ಮ ವೈಯಕ್ತಿಕ ಜೀವನವನ್ನೇ ನಮಗಾಗಿ ಅರ್ಪಿಸಿದ್ದು??
ನಿಮ್ಮಂತವರಿಂದಲೇ ದೇಶಕ್ಕೆ ಹಾಗೂ ಅಂಬೇಡ್ಕರ್ ಚಿಂತನೆಗಳಿಗೆ ಕಳಂಕ.
ಇದೇಲ್ಲಾ ಮಾಡೋದ್ರು ಬದ್ಲು ಎಲ್ಲಾದ್ರು ಹೋಗಿ ಸಾಯ್ರಿ…ಥೂ ಅಸಹ್ಯ🤑😤— ಸುನೀಲ್ ಹುಣಸೂರು (@sunilhc07) September 15, 2022
ಅಂಬೇಡ್ಕರ್ ಅವರು ಜೀವನ ಪೂರ್ತಿ ಶೋಷಿತರಿಗೆ, ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವಾಭಿಮಾನ ಜೀವನ ಕಟ್ಟಿಕೊಡುವ ಹಾದಿಯಲ್ಲಿ ಪಯಣ ಮುಗಿಸಿದರು.
ಇಂದು ಅವರ ಹೆಸರೇಳಿ ಅಧಿಕಾರ,ವಿದ್ಯೆ, ಹಣ ಮಾಡಿದ ಬಲಿತರು, ಅದೇ ಸ್ವಾಭಿಮಾನವನ್ನು ಕೆಲವರ ಪಾದದ ನೀರಿನಲ್ಲಿ ಮುಳುಗಿಸುತಿದ್ದಾರೆ. ಪಾಪ ಮಹನಾಯಕನ ಆತ್ಮ ಏಷ್ಟು ಮರುಗಿತೋ ?— Raghu C (@ChikkaiahRaghu) September 14, 2022