ಬೆಂಗಳೂರು-ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇ ದಶಪಥ ಅಂದರೆ 10 ಮಾರ್ಗಗಳ ಎಕ್ಸ್ಪ್ರೆಸ್ ಹೆದ್ದಾರಿಯೂ ಅಥವಾ 6 ಮಾರ್ಗಗಳ ಎಕ್ಸ್ಪ್ರೆಸ್ ಹೆದ್ದಾರಿಯೋ..?
ಫೆಬ್ರವರಿ 10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂಗ್ಲೀಷ್ನಲ್ಲಿ ಟ್ವೀಟೊಂದನ್ನು ಮಾಡಿದ್ದರು.
ಎಂಥ ದೃಶ್ಯ! 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಜೊತೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ವಿಶ್ವ ಮಟ್ಟದ ಮೂಲಭೂತ ಸೌಕರ್ಯ ಮತ್ತು ಕರ್ನಾಟಕದ ಹಿಂದೆಂದೂ ಇರದ ಬೆಳವಣಿಗೆಯ ದೃಶ್ಯ ರೂಪಕ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಡಬಲ್ ಇಂಜಿನ್ ರಾಜ್ಯದಲ್ಲಿ ಬೆರಗುಗಳನ್ನು ಸೃಷ್ಟಿಸುತ್ತಿದೆ
ಎಂದು ಬರೆದುಕೊಂಡಿದ್ದರು.
What a view! 10-lane Bengaluru-Mysuru Expressway alongside Vande Bharat Express, a visual depicting the story of world class infrastructure & unprecedented growth in Karnataka. Under Hon’ble PM @narendramodi Ji, our Double Engine government is working wonders in the state. pic.twitter.com/uLBGpdLLDc
— Basavaraj S Bommai (Modi Ka Parivar) (@BSBommai) February 10, 2023
ಆ ವೀಡಿಯೋದಲ್ಲಿ ಎಕ್ಸ್ಪ್ರೆಸ್ ವೇ ಕೆಳಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡುವ ದೃಶ್ಯ ಇತ್ತು.
ಮುಖ್ಯಮಂತ್ರಿಗಳ ಈ ಟ್ವೀಟ್ಗೆ ಪ್ರಧಾನಿ ಮೋದಿಯವರು ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದರು.
ಹತ್ತೋ ಅಥವಾ ಆರೋ..?
ಆದರೆ ವೀಡಿಯೋದಲ್ಲಿದ್ದ ಮಾರ್ಗಗಳ ಸಂಖ್ಯೆ ಆರು. ಎಡಭಾಗದಲ್ಲಿ ಮೂರು, ಬಲಭಾಗದಲ್ಲಿ ಮೂರು.
ಹಾಗಾದ್ರೆ 10 ಮಾರ್ಗಗಳ ರಸ್ತೆಯಲ್ಲಿ ಉಳಿದ ನಾಲ್ಕು ಮಾರ್ಗಗಳು ಎಲ್ಲಿ ಹೋದವು ಎನ್ನುವ ಕುತೂಹಲ ಉಂಟಾಯಿತು.
ಶೇಕಡಾ 40 ಕಮಿಷನ್ ಪಾಲು ಎಂಬ ವ್ಯಂಗ್ಯ
ಈ ಕುತೂಹಲದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇಕಡಾ 40 ಕಮಿಷನ್ ಆರೋಪವೂ ಅಂಟಿಕೊಳ್ತು.
10 ಮಾರ್ಗಗಳಲ್ಲಿ 4 ಮಾರ್ಗ ಕಮಿಷನ್ ರೂಪದಲ್ಲಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕುಚ್ಯೋದ್ಯ ಮಾಡಲಾಯಿತು.
ಈ ಕುಚ್ಯೋದ್ಯಗಳ ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಎಕ್ಸ್ಪ್ರೆಸ್ ವೇನಲ್ಲಿ ಇರುವುದು 10 ಮಾರ್ಗಗಳೇ ಎಂದು ಸಮರ್ಥನೆ ಕೊಡುವ ಪ್ರಯತ್ನ ಮಾಡಿದರು.
ಈ ಸಮರ್ಥನೆಯ ಭಾಗವಾಗಿ ಸರ್ವಿಸ್ ರಸ್ತೆಗಳನ್ನೂ ಹೆದ್ದಾರಿಯ ಮುಖ್ಯ ರಸ್ತೆಯ ಭಾಗವಾಗಿ ಸೇರಿಸಿ ಲೆಕ್ಕ ಹಾಕಿದರು. ಸರ್ವಿಸ್ ರಸ್ತೆ ಸೇರಿಸಿದರೆ 10 ಮಾರ್ಗಗಳು ಆಗ್ತವೆ ಎಂದು ವಾದಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೂ ಸರ್ವಿಸ್ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಭಾಗ ಎಂದು ವಾದಿಸಿ ಇದು 10 ಮಾರ್ಗಗಳ ಕಾಮಗಾರಿ ಎಂದು ವಾದಿಸಿದರು.
ನಿಜಾಂಶ ಏನು..?:
ನವೆಂಬರ್ 21, 2019ರಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಕೊಟ್ಟ ಲಿಖಿತ ಉತ್ತರದ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಇದು 6 ಮಾರ್ಗಗಳ ರಾಷ್ಟ್ರೀಯ ಹೆದ್ದಾರಿ.
ಬೆಂಗಳೂರು-ನಿಡಘಟ್ಟ ನಡುವಿನ 6 ಮಾರ್ಗಗಳ ಕಾಮಗಾರಿಗೆ ಫೆಬ್ರವರಿ, 2018ರಲ್ಲಿ ಎರಡು ಪ್ಯಾಕೇಜ್ಗಳಲ್ಲಿ ಗುತ್ತಿಗೆ ನೀಡಲಾಗಿದೆ. ಈ ಭಾಗದಲ್ಲಿ ಶೇಕಡಾ 18ರಷ್ಟು ಕಾಮಗಾರಿ ಮುಗಿದಿದೆ. ಮೈಸೂರು-ನಿಡಘಟ್ಟ ನಡುವೆ 6 ಮಾರ್ಗಗಳ ಕಾಮಗಾರಿ ಆರಂಭಕ್ಕೆ ದಿನಾಂಕ ಘೋಷಣೆ ಆಗಿಲ್ಲ, ಶೇಕಡಾ 85ರಷ್ಟು ಭೂಸ್ರ್ವಾಧೀನ ಪ್ರಕ್ರಿಯೆ ಮುಗಿದಿದೆ.
ಬೆಂಗಳೂರು-ನಿಡಘಟ್ಟ-ಮೈಸೂರು ನಡುವಿನ ಕಾಮಗಾರಿಯ ಒಟ್ಟು ವೆಚ್ಚ 7,400 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಈಗಾಗಲೇ 2,270 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ 6 ಮಾರ್ಗಗಳ ಕಾಮಗಾರಿ ಕಾಮಗಾರಿ ಆರಂಭದ 30 ತಿಂಗಳಲ್ಲಿ ಮುಗಿಯಲಿದೆ
ಎಂದು ಲೋಕಸಭೆಗೆ ಉತ್ತರಿಸಿದ್ದರು.
ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೊಟ್ಟ ಉತ್ತರ