ಟೋಲ್​ ದರ ಹೆಚ್ಚಳ ಸಹಜ – ಮೈಸೂರು ಸಂಸದ ಪ್ರತಾಪ್​ ಸಿಂಹ ಸಮರ್ಥನೆ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಜೂನ್​ 1ರಿಂದ ಆಗಿರುವ ಟೋಲ್​ ದರ ಹೆಚ್ಚಳವನ್ನು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ಹೊಸ ಆರ್ಥಿಕ ವರ್ಷ ಶುರುವಾದಾಗ ಇಡೀ ದೇಶದಲ್ಲಿ ಟೋಲ್​ ದರ ಹೆಚ್ಚಳ ಆಗುವುದು ಸಹಜ. ಈ ಹೈವೇಗೆ ಏಪ್ರಿಲ್​ನಲ್ಲಿ ಟೋಲ್​ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಈಗ ಶೇಕಡಾ 22ರಷ್ಟು ಏರಿಕೆ ಆಗಿದೆ

ಎಂದು ಪ್ರತಾಪ್​ ಸಿಂಹ ಅವರು ಸಮರ್ಥಿಸಿಕೊಂಡಿದ್ದಾರೆ.

ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗ್ತಿದೆ. ಯಾವ ಸಮಸ್ಯೆಯೂ ಇಲ್ಲ. ಟೋಲ್ ಸಂಗ್ರಹದ ಆರಂಭದಲ್ಲಿ ಫಾಸ್ಟ್​ಟ್ಯಾಗ್​ ಸಮಸ್ಯೆ ಇತ್ತು. ಆದರೆ ಈಗ ಈ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದೆ ಇದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ

ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಏಪ್ರಿಲ್​ 1ರಿಂದ ಟೋಲ್​ ದರ ಹೆಚ್ಚಳ ಆದಾಗ ಆಗ ಸಂಸದ ಪ್ರತಾಪ್​ ಸಿಂಹ ಅವರು ಏಕಾಏಕಿ ಟೋಲ್​ ದರ ಹೆಚ್ಚಳ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. 

ಮಾರ್ಚ್​ 12ರಂದು ಪ್ರಧಾನಿ ಮೋದಿ ಅವರು 58 ಕಿಲೋ ಮೀಟರ್​ ದೂರದ ಎಕ್ಸ್​ಪ್ರೆಸ್​ ವೇಯನ್ನು ಉದ್ಘಾಟಿಸಿದ್ದರು.

ಇದಾದ ಮೂರನೇ ತಿಂಗಳಿಗೆ ಟೋಲ್​ ದರ ಶೇಕಡಾ 20ರಷ್ಟು ಹೆಚ್ಚಳ ಆಗಿದೆ.