ವಿಧಾನಸಭಾ ಸಭಾಧ್ಯಕ್ಷ ಖಾದರ್​ ಬ್ಯಾನರ್​ ಹರಿದುಹಾಕಿದ ಕಿಡಿಗೇಡಿಗಳು

ವಿಧಾನಸಭೆ ಸಭಾಧ್ಯಕ್ಷರೂ ಆಗಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್​ ಅವರ ಪರವಾಗಿ ಹಾಕಲಾಗಿದ್ದ ಬ್ಯಾನರ್​ನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.

ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಖಾದರ್​ ಅವರಿಗೆ ಶುಭ ಕೋರಿ ತೊಕ್ಕೊಟ್ಟು ಮೇಲ್ಸೆತುವೆಯಿಂದ ಅಬ್ಬಕ್ಕ ವೃತ್ತದವರೆಗೆ ಬ್ಯಾನರ್​ ಹಾಕಲಾಗಿತ್ತು.

ಆ ಬ್ಯಾನರ್​​ಗಳನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ.

ಶನಿವಾರ ರಾತ್ರಿ ಬೈಕ್​ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಕೃತ್ಯ ಎಸಗಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ.