1 ವಾರದಲ್ಲಿ 1 ಕೋಟಿ ಗಿಡ – ಹಸಿರು ಹೆಚ್ಚಿಸಲು ಹೊಸ ಪ್ರಯತ್ನ

ಕರ್ನಾಟಕದಲ್ಲಿ ಒಂದು ವಾರದಲ್ಲಿ 1 ಕೋಟಿ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

ಜುಲೈ1ರಿಂದ ಜುಲೈ 7ರವರೆಗೆ 1 ಕೋಟಿ ಗಿಡ ನೆಡುವ ಅಭಿಯಾನ ನಡೆಯಲಿದೆ.

ಈ ಸಂಬಂಧ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಅವರು ಇವತ್ತು ಬೆಂಗಳೂರಿಲ್ಲಿರುವ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಸದ್ಯ ಅರಣ್ಯ ಪ್ರಮಾಣ ಶೇಕಡಾ 20.19ರಷ್ಟಿದ್ದು, ಇದನ್ನು ಶೇಕಡಾ 33ಕ್ಕೆ ಹೆಚ್ಚಿಸುವ ಸಲುವಾಗಿ ರಾಜ್ಯಾದ್ಯಂತ ಕೋಟಿ ಗಿಡ ನೆಡುವ ವನಮಹೋತ್ಸವ ಅಭಿಯಾನಕ್ಕೆ ತೀರ್ಮಾನಿಸಲಾಗಿದೆ.