ಮೈಸೂರು ಜಿಲ್ಲೆ ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಅವರಿಗೆ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್ ಸಿಗುತ್ತಾ..?
ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದ ವೇಳೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶ್ವನಾಯಕ ಶ್ರೀ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಮೂರು ಫೋಟೋಗಳನ್ನು ರಾಮದಾಸ್ ಅವರು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರನ್ನು ಎಸ್ ಎ ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಮತ್ತು ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಅವರು ಸ್ವಾಗತಿಸಿದರು.
ಮೋದಿಯವರು ವಿಮಾನದಿಂದ ಇಳಿಯುತ್ತಿದ್ದಂತೆ ಬೆನ್ನುಬಗ್ಗಿಸಿ ರಾಮದಾಸ್ ಅವರು ಸ್ವಾಗತಿಸಿದರು. ಆ ಬಳಿಕ ರಾಮದಾಸ್ ಅವರು ಮೋದಿಯವರ ಕೈಹಿಡಿದು ತಮ್ಮ ಮುಖವನ್ನಿಟ್ಟು ನಮಸ್ಕರಿಸಿದರು.
