ಶಾಸಕ ರಾಮದಾಸ್​​ ಹಂಚಿಕೊಂಡ ಮೋದಿ ಜೊತೆಗಿನ ಫೋಟೋ – ಯಾರಿಗೆ K R​ ಟಿಕೆಟ್​..?

ಮೈಸೂರು ಜಿಲ್ಲೆ ಕೆ ಆರ್​ ಕ್ಷೇತ್ರದ ಶಾಸಕ ಎಸ್​ ಎ ರಾಮದಾಸ್​ ಅವರಿಗೆ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್​ ಸಿಗುತ್ತಾ..?

ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದ ವೇಳೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶ್ವನಾಯಕ ಶ್ರೀ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಮೂರು ಫೋಟೋಗಳನ್ನು ರಾಮದಾಸ್​ ಅವರು ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರನ್ನು ಎಸ್​ ಎ ರಾಮದಾಸ್​, ಚಾಮರಾಜ ಕ್ಷೇತ್ರದ ಶಾಸಕ ಎಲ್​ ನಾಗೇಂದ್ರ ಮತ್ತು ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್​ ಅವರು ಸ್ವಾಗತಿಸಿದರು.

ಮೋದಿಯವರು ವಿಮಾನದಿಂದ ಇಳಿಯುತ್ತಿದ್ದಂತೆ ಬೆನ್ನುಬಗ್ಗಿಸಿ ರಾಮದಾಸ್​ ಅವರು ಸ್ವಾಗತಿಸಿದರು. ಆ ಬಳಿಕ ರಾಮದಾಸ್​ ಅವರು ಮೋದಿಯವರ ಕೈಹಿಡಿದು ತಮ್ಮ ಮುಖವನ್ನಿಟ್ಟು ನಮಸ್ಕರಿಸಿದರು.

ಪ್ರಧಾನಿ ಮೋದಿಯವರಿಗೆ ಸ್ವಾಗತದ ವೇಳೆ ಬೆನ್ನು ಬಾಗಿಸಿ ನಮಸ್ಕರಿಸಿದ ಶಾಸಕ ಎಸ್​ ಎ ರಾಮದಾಸ್​, ಶಾಸಕ ಎಲ್​ ನಾಗೇಂದ್ರ. ಪಕ್ಕದಲ್ಲಿ ನಿಂತಿದ್ದ ಶಾಸಕ ಹರ್ಷವರ್ಧನ್​
ಪ್ರಧಾನಿ ಮೋದಿಯವರಿಗೆ ಸ್ವಾಗತದ ವೇಳೆ ಬೆನ್ನು ಬಾಗಿಸಿ ನಮಸ್ಕರಿಸಿದ ಶಾಸಕ ಎಸ್​ ಎ ರಾಮದಾಸ್​, ಶಾಸಕ ಎಲ್​ ನಾಗೇಂದ್ರ. ಪಕ್ಕದಲ್ಲಿ ನಿಂತಿದ್ದ ಶಾಸಕ ಹರ್ಷವರ್ಧನ್​

ಕಳೆದ ಬಾರಿ ಮೈಸೂರಿಗೆ ಬಂದಿದ್ದಾಗ ಮೋದಿಯವರು ರಾಮದಾಸ್​ ಅವರನ್ನು ತಮ್ಮ ಬಳಿಗೆ ಕರೆದು ಅವರ ಬೆನ್ನಿಗೆ ಪ್ರೀತಿಯಿಂದ ಗುದ್ದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘದ ಪದಾಧಿಕಾರಿಗಳು ಈ ಬಾರಿ ಕೆ ಆರ್​ ಕ್ಷೇತ್ರದಿಂದ ರಾಮದಾಸ್​ ಅವರ ಬದಲಿಗೆ ಬೇರೆಯವರಿಗೆ ಟಿಕೆಟ್​ ನೀಡಬೇಕು ಎಂಬ ಆಗ್ರಹ ಮಾಡಿದ್ದರು. ರಾಮದಾಸ್​ ಅವರು ಕೆಲಸ ಮಾಡಿಲ್ಲ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು.

ಕೆ ಆರ್​ ಕ್ಷೇತ್ರದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್​ ವಿ ರಾಜೀವ್​ ಅವರ ಪರ ಬ್ರಾಹ್ಮಣರ ಸಂಘ ಲಾಬಿ ನಡೆಸಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರು ಕೂಡಾ ಈ ಬಾರಿ ರಾಮದಾಸ್​ ಅವರಿಗೆ ಟಿಕೆಟ್​ ತಪ್ಪಿಸಿ ತಮ್ಮ ಆಪ್ತವಲಯದಲ್ಲಿರುವ ರಾಜೀವ್​ ಅವರಿಗೆ ಟಿಕೆಟ್​ ಕೊಡಿಸುವ ಪ್ರಯತ್ನ ಜಾರಿಗೊಳಿಸಿದ್ದಾರೆ.

ಆದರೆ ಈಗ ರಾಮದಾಸ್​ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ ಈ ಬಾರಿಯೂ ಮೋದಿಯವರ ಅಭಯದ ಕಾರಣದಿಂದ ಕೆ ಆರ್​ ಕ್ಷೇತ್ರದಲ್ಲಿ ಮತ್ತೆ ರಾಮದಾಸ್​ ಅವರಿಗೆನೇ ಟಿಕೆಟ್​ ಸಿಗುತ್ತಾ ಎಂಬ ಕುತೂಹಲ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here