ಎಐಎಡಿಎಂಕೆ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಎಡಪ್ಪಡಿ ಕೆ. ಪಳನಿಸ್ವಾಮಿ ಅವರಿಗೆ ಪಕ್ಷದ ಮುಖ್ಯ ಕಚೇರಿಯ ಬೀಗದ ಕೈಯನ್ನು ಹಸ್ತಾಂತರಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಕಂದಾಯ ಇಲಾಖೆಗೆ ಸೂಚಿಸಿದೆ.
ನ್ಯಾಯಮೂರ್ತಿ ಎನ್.ಸತೀಶ್ ಕುಮಾರ್ ಅವರು ಎಐಎಡಿಎಂಕೆ ಸದಸ್ಯರಿಗೆ ಒಂದು ತಿಂಗಳ ಕಾಲ ಮುಖ್ಯ ಕಚೇರಿಯನ್ನು ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಗಲಭೆಗಳನ್ನು ಸಂಭವಿಸದಂತೆ ಎಚ್ಚರ ವಹಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ಪಕ್ಷದ ಮುಖ್ಯ ಕಚೇರಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿ ಇ. ಪಳನಿಸ್ವಾಮಿ ಹಾಗೂ ಉಚ್ಚಾಟಿತ ನಾಯಕ ಒ. ಪನ್ನೀರಸೆಲ್ವಂ ಅವರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.