Udupi: ಜೂಜು ಅಡ್ಡೆ ಮೇಲೆ ದಾಳಿ – 24 ಮಂದಿ ಬಂಧನ – ನಗದು, ಕಾರು, ಬೈಕ್​ ವಶ

ಉಡುಪಿ ಜಿಲ್ಲೆಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 22 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಬ್ದುಲ್​ ಮುನೀರ್​, ಸಲ್ಮಾನ್​, ಬಸವರಾಜ್​, ವಿಷ್ಣು ಕೆ ವಿ, ದಿನೇಶ್​, ಕೆ ವಿನಾಯಕ ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ ಇ ಆ್ಯಂಟನಿ, ಶ್ರೀತಿರಾಜ್​, ರಘು, ಹುಸೈನ್​, ಸಂದೇಶ್​, ರಾಜು ಮೊಗೇರ, ಗೋಪಾಲ, ಗಣೇಶ, ಮಿಥುನ್​, ಸುಧರ್ಮ, ಕಮಲಾಕ್ಷ ಮತ್ತು ಸುಧಾಕರ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಕೋಟಾ ಠಾಣೆ ಪಿಎಸ್​ಐ ಶಂಭುಲಿಂಗಯ್ಯ ಅವರ ನೇತೃತ್ವದಲ್ಲಿ ಪೊಲೀಸರ ತಂಡ ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ಕ್ರಾಸ್​ನಲ್ಲಿರುವ ವಿನಾಯಕ ಹಾಲ್​ನಲ್ಲಿ ಜೂಜು ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿತು.

24 ಮಂದಿಯನ್ನು ಬಂಧಿಸಿ  1 ಲಕ್ಷದ 49 ಸಾವಿರದ 680 ರೂಪಾಯಿ ಮೊತ್ತದ ನಗದು, 3 ಸ್ಟೀಲ್​ ಟೇಬಲ್​, 24 ಪ್ಲಾಸ್ಟಿಕ್​ ಕುರ್ಚಿಗಳು, ಮೂರು ಕಾರು, 2 ಸ್ಕೂಟರ್ಸ್​ನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here