Bengaluru: ಬೆದರಿಸಿ ಹಣ ಸುಲಿಗೆ – YouTube ಚಾನೆಲ್​ನ ನಾಲ್ವರ ಬಂಧನ

ಯೂಟ್ಯೂಬ್​ ಚಾನೆಲ್​ ಹೆಸರು ಹೇಳಿಕೊಂಡು ವ್ಯಾಪಾರಿಗಳಿಂದ ಸುಲಿಗೆ ಮಾಡುತ್ತಿದ್ದ ಕನ್ನಡದ ಯೂಟ್ಯೂಬ್​ ಚಾನೆಲ್​ನ ನಾಲ್ವರನ್ನು ಬೆಂಗಳೂರು ನಗರದ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಆನಂದ್​ ಅಲಿಯಾಸ್​ ಫಿಗರ್​, ಆತ್ಮಾನಂದ ಅಲಿಯಾಸ್​ ಕೃಷ್ಣೇಗೌಡ, ಶ್ರೀನಿವಾಸ ಅಲಿಯಾಸ್​ ರೇಷ್ಮೆನಂದು ಶ್ರೀನಿವಾಸ ಮತ್ತು ಕೃಷ್ಣಮೂರ್ತಿ ಬಂಧಿತರು.

ಈ ನಾಲ್ವರು ನಾಲ್ಕು ವರ್ಷಗಳಿಂದ ಎಕೆ ನ್ಯೂಸ್​ ಎಂಬ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದರು. 

ಅಂಗಡಿ ಮಾಲೀಕರ ಬಳಿಗೆ ತೆರಳಿ ಅವರನ್ನು ಬೆದರಿಸಿ ಈ ನಾಲ್ವರು ಸುಲಿಗೆ ಮಾಡುತ್ತಿದ್ದರು. ಇವರ ಕಿರುಕುಳದಿಂದ ಬೇಸತ್ತಿದ್ದ ಕೆ ಆರ್​ ಪುರಂನ ಮಾಂಸ ವ್ಯಾಪಾರಿ ಸಾದಿಕ್​ ಖಾನ್​ ಕೊಟ್ಟ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 

ಇದೇ ರೀತಿ 10ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಈ ನಾಲ್ವರು ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಬಂಧಿತರಿಂದ ಕಾರು, ಮೊಬೈಲ್​ ಫೋನ್​ ಮತ್ತು 13 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. 

LEAVE A REPLY

Please enter your comment!
Please enter your name here