Loksabha: ಪ್ರಧಾನಿ ಮೋದಿ ಭಾಷಣ ಮುಗಿಯುತ್ತಿದಂತೆ Congress ಸಂಸದ ಲೋಕಸಭೆಯಿಂದ ಅಮಾನತು

ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌಧರಿ ಅವರನ್ನು ಲೋಕಸಭೆ ಕಲಾಪದಿಂದ ಅಮಾನತು ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮುಗಿಯುತ್ತಿದ್ದಂತೆ ಅಧೀರ್​ ರಂಜನ್​ ಅವರನ್ನು ಸದನದಿಂದ ಅಮಾನತು ಮಾಡುವ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ನಿರ್ಣಯ ಮಂಡಿಸಿದರು.

ಆ ನಿರ್ಣಯವನ್ನು ಲೋಕಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು. 

ಅಧೀರ್​ ರಂಜನ್​ ಅವರ ವಿರುದ್ಧದ ತನಿಖೆ ನಡೆಸಲು ಹಕ್ಕುಭಾಧ್ಯತಾ ಸಮಿತಿ ಶಿಫಾರಸ್ಸು ಮಾಡಿ ಸಮಿತಿಯ ವರದಿ ಬರುವವರೆಗೆ ಲೋಕಸಭೆಯಲ್ಲಿ ಅಮಾನತು ಮಾಡುವ ನಿರ್ಣಯ ಅಂಗೀಕರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಅಧೀರ್​ ರಂಜನ್​ ಚೌಧರಿ ಅವರ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here