ಕೃಷಿ ಹೊಂಡ ಹೆಸರು ಬದಲು, ಬಡ್ಡಿ ಇಲ್ಲದ ಸಾಲದ ಮೊತ್ತದ ಹೆಚ್ಚಳ, ರೈತರಿಗೆ ಜೀವವಿಮೆ

ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕೊನೆಯ ಬಜೆಟ್​ನ್ನು ಮಂಡಿಸಿದ್ದಾರೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್​ನಲ್ಲಿ ರೈತರಿಗೆ ಸಿಕ್ಕಿದ್ದೇನು..?
– ಬಡ್ಡಿ ರಹಿತ ಅಲ್ಪಾವಧಿ ಸಾಲದ ಮೊತ್ತ 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ
– ಕಿಸಾನ್​ ಕ್ರೆಡಿಟ್​ ಕಾರ್ಡ್​​ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಖರೀದಿಗೆ 10 ಸಾವಿರ ರೂಪಾಯಿ ಸಹಾಯಧನ – 50 ಲಕ್ಷ ರೈತರಿಗೆ ಲಾಭ
– ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಜೀವನ್​ಜ್ಯೋತಿ ವಿಮೆ ಯೋಜನೆ – 180 ಕೋಟಿ ರೂ. ಅನುದಾನ
– 100 ಹಾರ್ವೆಸ್ಟರ್​​ಗಳ ಖರೀದಿಗೆ 50 ಲಕ್ಷ ರೂಪಾಯಿಯಂತೆ 50 ಕೋಟಿ ರೂಪಾಯಿ
– ಇಸ್ರೋ ಸಹಯೋಗದೊಂದಿಗೆ ಡಿಜಿಟಲ್​ ಕೃಷಿಗೆ 50 ಕೋಟಿ ರೂಪಾಯಿ
– ರೈತ ಉತ್ಪಾದಕ ಸಂಸ್ಥೆಗಳಿಗೆ 10 ಲಕ್ಷ ರೂ.ವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ
– ರೈತ ಸಿರಿ ಯೋಜನೆಯಡಿ ಕಿರುಧಾನ್ಯಗಳ ಬೆಳೆಗಾರರಿಗೆ ವರ್ಷಕ್ಕೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ಪ್ರೋತ್ಸಾಹ ಧನ
– ಪ್ರತಿ ತಾಲೂಕಿನಲ್ಲಿ 50 ಹೆಕ್ಟರ್​ಗಳಲ್ಲಿ ನೈಸರ್ಗಿಕ ಕೃಷಿಗೆ ನೆರವು
– ರೈತರು ತಮ್ಮ ಜಮೀನಿನಲ್ಲಿ ಜಲ ಹೊಂಡ ನಿರ್ಮಿಸಲು ಜಲ ನಿಧಿ ಯೋಜನೆಯಡಿ ನೆರವು – ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಹೊಂಡ ಕಾರ್ಯಕ್ರಮಕ್ಕೆ ಬದಲಿ ನಾಮಕರಣ 

LEAVE A REPLY

Please enter your comment!
Please enter your name here