Loksabha: ಟಿಕೆಟ್​ ಕೊಡಲ್ಲ ಎಂದು ಮೋದಿಯವರು ಹೇಳಿದ್ದಾರೆ – ಚುನಾವಣಾ ನಿವೃತ್ತಿ ಘೋಷಿಸಿದ BJP MP ಬಚ್ಚೇಗೌಡ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ ಎನ್​ ಬಚ್ಚೇಗೌಡ ಅವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಪ್ರಕಾರ 75 ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿಕೊಳ್ಳಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಈ ಬಾರಿ ಲೋಕಸಭೆಗೆ ಟಿಕೆಟ್​ ಕೊಡುವುದಿಲ್ಲ ಎಂದು ಮೋದಿ ನನಗೆ ಹೇಳಿಬಿಟ್ಟಿದ್ದಾರೆ.

ಒಂದು ಕುಟುಂಬಕ್ಕೆ ಒಂದೇ ಟಿಕೆಟ್​ ಎಂದು ಘೋಷಣೆ ಮಾಡಿದ್ದಾರೆ. ತಂದೆ-ಮಗ-ಮೊಮ್ಮಗ-ಮಗಳ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಮೋದಿಯವರು ಹೇಳಿದ್ದಾರೆ

ಎಂದು ಬಿ ಎನ್​ ಬಚ್ಚೇಗೌಡ ಅವರು ಹೇಳಿದ್ದಾರೆ.

ಮಾಜಿ ಸಚಿವ ಸುಧಾಕರ್​ ಮತ್ತು ಎಂಟಿಬಿ ವಿರುದ್ಧ ಅಸಮಾಧಾನ:

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್​ ಮತ್ತು ಸಚಿವ ಎಂ ಟಿ ಬಿ ನಾಗರಾಜ್​ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಶಿಷ್ಟಾಚಾರಕ್ಕೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ನನ್ನ ಹೆಸರಿತ್ತು. ಆದರೆ ಸಂಸದನಾಗಿ ನನ್ನನ್ನು ಅವರು ಬಳಸಿಕೊಳ್ಳಲಿಲ್ಲ

ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ಗೆ ವಾಪಸ್​ ಬರ್ತಾರೆ:

ಕರ್ನಾಟಕದಲ್ಲಿ ಇದುವರೆಗೆ ಬಿಜೆಪಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ. ನಾಲ್ಕು ತಿಂಗಳಾಗುತ್ತ ಬರ್ತಿದೆ, ಪ್ರತಿಪಕ್ಷದ ನಾಯಕನ್ನ ಮಾಡಲಿಕ್ಕೆ ಆಗಲಿಲ್ಲ. ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿಯಲ್ಲೇ ಇರುವುದಕ್ಕೆ  ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಬಳಿ ಇದ್ದ ಕಾರ್ಯಕರ್ತರಿಗೆ ಇಷ್ಟ ಇಲ್ಲ. ಜೆಡಿಎಸ್​ನವರೂ ಕಾಂಗ್ರೆಸ್​​ಗೆ ಬರ್ತಾರೆ 

ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ ಎನ್ ಬಚ್ಚೇಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here