ಜೀಪ್ಗೆ ಡಿಕ್ಕಿ ಹೊಡೆದು ಮಾರುತಿ ಓಮಿನಿ ಕಾರಿನಲ್ಲಿ ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಭಾವಚಿತ್ರ ಇರುವ ಕ್ಯಾಲೆಂಡರ್, ಮದ್ಯದ ಪ್ಯಾಕೆಟ್ಗಳು ಮತ್ತು ಲಾಂಗ್ ಪತ್ತೆಯಾಗಿದೆ.
ಚಿಕ್ಕಮಗಳೂರು ನಗರ ಎಐಟಿ ಸರ್ಕಲ್ನಲ್ಲಿ ಜೀಪ್ಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರೇ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರನ್ನು ಪರಿಶೀಲಿಸಿದಾಗ ಸಿ ಟಿ ರವಿ ಭಾವಚಿತ್ರ ಇರುವ ಕ್ಯಾಲೆಂಡರ್, ಮದ್ಯದ ಬಾಟಲ್, ಲಾಂಗ್ ಪತ್ತೆ ಆಗಿದೆ.
ಸಿ ಟಿ ರವಿ, ಓಟಿ ರವಿಗೆ ಧಿಕ್ಕಾರ ಎಂದು ಸ್ಥಳೀಯರು ಘೋಷಣೆ ಕೂಗಿದ್ದಾರೆ.
ADVERTISEMENT
ADVERTISEMENT