ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಷಾ ರಾಜೀನಾಮೆಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರ ಪ್ರಸ್ತುತ ಕೇಂದ್ರಾಡಳಿತ ಪ್ರದೇಶದವಾಗಿದೆ. ಇಲ್ಲಿ ಪ್ರತಿನಿತ್ಯ ಹಿಂದೂಗಳ ಹತ್ಯೆ ನಡೆಯುತ್ತಲೇ ಇದೆ. ಆದ್ದರಿಂದ ಕೇಂದ್ರದ ಗೃಹಮಂತ್ರಿಯಾಗಿರುವ ಅಮಿತ್ ಷಾ ಅವರ ರಾಜೀನೆಮ ಕೇಳುವುದು ಅನಿವಾರ್ಯವಾಗಿದೆ.
ಇತ್ತೀಚೆಗೆ ಕ್ರಿಕೇಟ್ ಅನಗತ್ಯವಾಗಿ ಪ್ರಸಿದ್ದತೆ ಹಾಗೂ ಪ್ರಚಾರವನ್ನು ಪಡೆಯುತ್ತಿದೆ. ಆದ್ದರಿಂದ ಇದರ ಬದಲಾಗಿ ಕ್ರೀಡಾ ಇಲಾಖೆಯ ಸಚಿವ ಸ್ಥಾನವನ್ನು ಅವರಿಗೆ ನೀಡಬಹುದು ಎಂದು ಹೇಳಿದ್ದಾರೆ.
Since there is President's Rule in J&K , and yet daily a Kashmiri Hindu is being shot dead, it has become necessary ask for Amit Shah's resignation. He can be instead given Sports Ministry since nowadays cricket is receiving undue interest.
— Subramanian Swamy (@Swamy39) June 2, 2022
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಕೆಲವೇ ದಿನಗಳಲ್ಲಿ 3 ಜನ ಹಿಂದೂಗಳ ಹತ್ಯೆಯಾಗಿದೆ. ಹಾಗೂ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2022 ರ ಐಪಿಎಲ್ ಪೈನಲ್ ಪಂದ್ಯವನ್ನು ಇವರು ಕ್ರೀಡಾಂಗಣದಲ್ಲಿಯೇ ವೀಕ್ಷಣೆ ಮಾಡಿದ್ದರು. ಮತ್ತು ತಮ್ಮ ಮಗ ಹಾಗೂ ಬಿಸಿಸಿಐನ ಕಾರ್ಯದರ್ಶಿ ಜಯ್ ಷಾ ಅವರು ಪಕ್ಕದಲ್ಲಿಯೇ ಇದ್ದರು.
ಇವೆರಡೂ ಘಟನೆಗಳ ಆಧಾರದ ಮೇಲೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿದ್ದಾರೆ.