BJP MLAs: ವಿಧಾನಸಭೆಯಲ್ಲಿ BJP ಶಾಸಕ ದುವರ್ತನೆ – ಬಿಜೆಪಿ ಶಾಸಕರು ಅಮಾನತು – ಸ್ಪೀಕರ್​ ಆದೇಶ

ವಿಧಾನಸಸಭೆಯಲ್ಲಿ ದುವರ್ತನೆ ತೋರಿದ ಬಿಜೆಪಿ ಶಾಸಕರನ್ನು ಸ್ಪೀಕರ್​ ಯು ಟಿ ಖಾದರ್​ ಅವರು ಶುಕ್ರವಾರದವರೆಗೆ ಕಲಾಪದಿಂದ ಅಮಾನತು ಮಾಡಿದ್ದಾರೆ.

ಮಾಜಿ ಡಿಸಿಎಂ ಆಗಿರುವ ಡಾ ಸಿ ಎನ್​ ಅಶ್ವತ್ಥ್​ ನಾರಾಯಣ, ಕಾರ್ಕಳ ಶಾಸಕ ವಿ ಸುನಿಲ್​ ಕುಮಾರ್​, ಪದ್ಮನಾಭ ನಗರ ಶಾಸಕ ಆರ್​ ಅಶೋಕ್​, ವೇದವ್ಯಾಸ್​ ಕಾಮತ್​, ಉಮನಾಥ್​ ಕೋಟ್ಯಾನ್​, ಯಶ್​ಪಾಲ್​ ಸುವರ್ಣ,  ಧೀರಜ್​ ಮುನಿರಾಜ್​, ಅರವಿಂದ ಬೆಲ್ಲದ್​, ಅರಗ ಜ್ಞಾನೇಂದ್ರ ಮತ್ತು ಭರತ್​ ಶೆಟ್ಟಿ ಅವರನ್ನು ಜುಲೈ 21ರವರೆಗೆ ಅಂದರೆ ಈ ಅಧಿವೇಶನ ಮುಗಿಯುವರೆಗೆ ಅಮಾನತು ಮಾಡಲಾಗಿದೆ.

ಉಪ ಸ್ಪೀಕರ್​ ರುದ್ರಪ್ಪ ಲಮಾಣಿ ಅವರ ಪೀಠದ ಎದುರು ಬಿಜೆಪಿ ಶಾಸಕರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಸದನಕ್ಕೆ ಅಗೌರವ ತೋರಿದ್ದರು.

LEAVE A REPLY

Please enter your comment!
Please enter your name here